- Advertisement -
- Advertisement -
ಬೆಂಗಳೂರು: ದಸರಾ ವೀಕ್ಷಣೆ ಮಾಡುವ ಪ್ರಯಾಣಿಕರಿಗೆ ಕೆಎಸ್ ಆರ್ ಟಿಸಿ ಸೂಪರ್ ಆಫರ್ ಒಂದನ್ನು ನೀಡಿದೆ. ಮೈಸೂರು ಮತ್ತು ಮಂಗಳೂರು ದಸರಾ ದರ್ಶನಕ್ಕೆ ಹೋಗುವರಿಗೆ ವಿಶೇಷ ಪ್ಯಾಕೇಜ್ ನೀಡಿದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಿದೆ.ಆದರೆ ಇದರ ಅನುಭವಕ್ಕಾಗಿ ಪ್ರವಾಸ ಸ್ಪರ್ಧೆ ಕೂಡ ಏರ್ಪಡಿಸಲಾಗಿದೆ.
ಅಷ್ಟಕ್ಕೂ ಏನಿದು ಆಫರ್ ಅಂತೀರಾ…ನೀವು ಕೆಎಸ್ ಆರ್ ಟಿಸಿ ನ ದಸರಾ ವಿಶೇಷ ಪ್ಯಾಕೇಜ್ ಟೂರ್ ಕೈಗೊಂಡರೆ ಅದರ ಬಗ್ಗೆ ಅನುಭವನ್ನು ಹಂಚಿಕೊಳ್ಳಬೇಕು. ಅದು ಒಂದು ನಿಮಿಷದ ವಿಡಿಯೋ ರೂಪದಲ್ಲಿರಬೇಕು.
ಈ ವಿಡಿಯೋವನ್ನು ಫೇಸ್ ಬುಕ್ , ಮತ್ತ ಟ್ವಿಟ್ಟರ್ ಮೂಲಕ ಎರಡರಲ್ಲೂ #dasarawithKSRTC ಎಂಬ ಹ್ಯಾಷ್ ಟ್ಯಾಗ್ ಗಳ ಜೊತೆ ಟ್ಯಾಗ್ ಮಾಡಬೇಕು. ಅತ್ಯುತ್ತಮವಾಗಿ ವಿಡಿಯೋ ಮೂಲಕ ತಮ್ಮ ಅನುಭವ ಹಂಚಿಕೊಂಡವರಿಗೆ ಮೊದಲನೇ ಬಹುಮಾನ: ರೂ. 5,000, ದ್ವೀತಿಯ ಬಹುಮಾನ, ರೂ 3,000 ತೃತೀಯ ಬಹುಮಾನ: ರೂ 2,000 ನೀಡಲಾಗುತ್ತದೆ.
- Advertisement -