- Advertisement -
- Advertisement -
ಮಂಗಳೂರು: ಮೀಜಾರು ಸಮೀಪ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದರೆ ಯವರ ಕಾರು ಅಪಘಾತವಾಗಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಮೀಜಾರು ಸಮೀಪ ಎದುರಿನಿಂದ ನಡೆದುಕೊಂಡು ಹೋಗುತಿದ್ದ ವ್ಯಕ್ತಿಗೆ ಸುದರ್ಶನ್ ರ ಇನ್ನೋವಾ ಕಾರು ಅಪಘಾತವಾಗುವುದನ್ನು ತಪ್ಪಿಸಿದಾಗ , ಕೆಸರಿನಲ್ಲಿ ಕಾರು ಸ್ಕಿಡ್ ಆಗಿ ಎದುರಿನಿಂದ ಬರುತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಇನ್ನೋವಾ ಸಂಪೂರ್ಣ ಜಖಂಗೊಂಡಿದೆ. ಅಪಘಾತದ ತೀವ್ರತೆ ನೋಡಿದ್ರೆ ಸುದರ್ಶನ್ ಅವರು ಯಾವುದೇ ಅಪಾಯಕ್ಕೆ ಒಳಗಾಗದೇ ಇರೋದು ದೇವರ ದಯೆ ಅಂತಾ ಸ್ಥಳೀಯರು ಹೇಳುತ್ತಿದ್ದಾರೆ.
- Advertisement -