- Advertisement -
- Advertisement -
ಚಂಡೀಗಡ: ನಟ ಸೋನು ಸೂದ್ ಸಾಮಾಜಿಕ ಕಳಕಳಿಯಿಂದ ಕೊರೋನಾ ಸಂದರ್ಭದಲ್ಲಿ ಹಲವಾರು ಕಾರ್ಮಿಕರಿಗೆ ಸಹಾಯ ಮಾಡಿದ್ದರು. ಅವರ ಈ ನಡೆಯನ್ನು ಗುರುತಿಸಿ ಅವರನ್ನು ಪಂಜಾಬ್ ರಾಜ್ಯದ ರಾಯಭಾರಿಯಾಗಿ ಭಾರತೀಯ ಚುನಾವಣಾ ಆಯೋಗ ನೇಮಿಸಿದೆ.ಪಂಜಾಬ್ ಚುನಾವಣಾ ಅಧಿಕಾರಿ ಎಸ್ ಕರುಣಾ ರಾಜ್ ಈ ಕುರಿತು ಭಾರತೀಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದು, ಅದಕ್ಕೆ ಅನುಮೋದನೆ ನೀಡಿದೆ ಎಂದು ತಿಳಿದುಬಂದಿದೆ
ಪಂಜಾಬ್ನ ಮೊಗಾ ಜಿಲ್ಲೆಗೆ ಸೇರಿದ ವಲಸಿಗರು ಕರೋನಾ ವೈರಸ್ ಲಾಕ್ಡೌನ್ ಸಮಯದಲ್ಲಿ ತಮ್ಮ ಮನೆಗಳನ್ನು ತಲುಪಲಾಗದೆ ನೊಂದಿದ್ದರು ಈ ಸಮಯದಲ್ಲಿ ಸಹಾಯ ಮಾಡಿದ್ದ ಹಿನ್ನೆಲೆಯಲ್ಲಿ ಸೋನು ಸೂದ್ ಅವರು ರಾಷ್ಟ್ರೀಯವಾಗಿಗಮನ ಸೆಳೆದರು. ಇದಲ್ಲದೆ ದೇಶದ ವಿವಿದೆಡೆಯ ವಲಸೆ ಕಾರ್ಮಿಕರಿಗೆ ತಮ್ಮ ಮನೆ ತಲುಪಲು ಸಹಾಯ ಮಾಡಿ ಸೋನು ಸೂದ್ ಮಾದರಿಯಾಗಿದ್ದರು.
- Advertisement -