Friday, April 26, 2024
Homeತಾಜಾ ಸುದ್ದಿಗಂಡನಿಂದ ಎಸ್ಕೇಪ್ ಆಗೋದಕ್ಕೆ ಕೊರೊನಾ‌ ನಾಟಕವಾಡಿದ ಸಾಫ್ಟ್‌ವೇರ್‌ ಎಂಜಿನಿಯರ್

ಗಂಡನಿಂದ ಎಸ್ಕೇಪ್ ಆಗೋದಕ್ಕೆ ಕೊರೊನಾ‌ ನಾಟಕವಾಡಿದ ಸಾಫ್ಟ್‌ವೇರ್‌ ಎಂಜಿನಿಯರ್

spot_img
- Advertisement -
- Advertisement -

ಬೆಂಗಳೂರು : ಕೊರೊನಾ ಅದೆಷ್ಟೋ ಮಂದಿಯ ಸ್ವಾತಂತ್ರ್ಯಕ್ಕೆ ಧಕ್ಕೆ‌ ಮಾಡಿರೋದಂತೂ ಸುಳ್ಳಲ್ಲ. ಕೊರೊನಾ ಭಯದಿಂದಾಗಿ‌ ಅನೇಕರಿಗೆ ಮನೆಯಿಂದ ಹೊರಗೆ ಬರೋದಕ್ಕೂ‌ ಸಾಧ್ಯವಾಗುತ್ತಿಲ್ಲ. ಇನ್ನು ಕೆಲವರು ಮನೆ ಮಂದಿಯಿಂದಾಗಿ ಹೊರಗಡೆ ಹೋಗೋದಕ್ಕೆ ಸಾಧ್ಯವಾಗುತ್ತಿಲ್ಲ. ಇದೇ ಪರಿಸ್ಥಿತಿಯಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಮಹಿಳೆಯೊಬ್ಬಳು ಹೊರಗಡೆ ಹೋಗೋದಕ್ಕೆ ಖರ್ತನಾಕ್ ಐಡಿಯಾ ಮಾಡಿ ಸಿಕ್ಕಿ ಬಿದ್ದಿದ್ದಾಳೆ.

ಬೆಂಗಳೂರಿನ ಬೊಮ್ಮನಹಳ್ಳಿಯ ವಿಕ್ಕಿಕುಮಾರ್ ಹಾಗೂ ರುಚಿಕುಮಾರಿ, ಸಾಫ್ಟ್ ವೇರ್  ಕಂಪೆನಿಯಲ್ಲಿ‌ ಕೆಲ್ಸ ಮಾಡ್ತಿದ್ರು. ಕೋವಿಡ್ ಕಾರಣಕ್ಕೆ ವರ್ಕ್ ಫ್ರಾಮ್ ಹೋಮ್ ಮಾಡ್ತಿದ್ದರು. ಬೆಂಗಳೂರಿನಲ್ಲಿ ಕೊರೋನಾ ಸಂಖ್ಯೆ ಮಿತಿಮೀರಿದ ಭಯಕ್ಕೆ ಮನೆಯಿಂದ ಯಾವುದೇ ಕಾರಣಕ್ಕೂ ಹೊರಹೋಗ್ಬೇಡ ಅಂತ ವಿಕ್ಕಿ ಪತ್ನಿ ರುಚಿಗೆ ಕಟ್ಟಪ್ಪಣೆ ಹೊರಡಿಸಿದ್ದ. ಇದೇ ಕಾರಣಕ್ಕೆ ಇಬ್ಬರ ನಡುವೇ ಪದೇ-ಪದೇ ಕಿರಿಕ್ ನಡೀತಿತ್ತು.‌ ಹೇಗಾದರೂ ಮಾಡಿ ಮನೆಯಿಂದ ಆಚೆ ಹೋಗಿ, ಗಂಡನಿಂದ ಮುಕ್ತಿ ಪಡೆದು ದೂರಹೋಗಿ ಬದುಕಬೇಕು ಅಂತ ಡಿಸೈಡ್ ಮಾಡಿದ್ಳು. ಅದರಂತೆ ಆ ಲೇಡಿ ರುಚಿಕುಮಾರ್ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿದ್ಳು.

ಇದೇ ರುಚಿಕುಮಾರಿ, ದೆಹಲಿ ತನ್ನ ಸ್ನೇಹಿತ ಮೊಹಮ್ಮದ್ ಗೆ ಕರೆ ಮಾಡಿ, ತನ್ನನ್ನ ಹೊರಗಡೆ ಕರೆದೊಯ್ಯುವಂತೆ ಹೇಳಿದ್ಳು..”ನೀನು ಪಿಪಿಇ ಕಿಟ್ ಧರಿಸಿಕೊಂಡು ಕರೋನಾ ಟೆಸ್ಟ್ ಮಾಡೋ ರೀತಿ ಬಂದು, ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗು.‌” ಅಂತ ಮಾಸ್ಟರ್ ಪ್ಲಾನ್ ಮಾಡಿದ್ಳು.‌ ಅದರಂತೆ ಇದೇ ಸೆಪ್ಟೆಂಬರ್ 1 ಕ್ಕೆ ಸ್ನೇಹಿತೆ ರುಚಿ ಮನೆಗೆ ಬಂದಿದ್ದ ಮೊಹಮ್ಮದ್, ರುಚಿ ಹಾಗೂ ಆಕೆ ಪತಿ ವಿಕ್ಕಿಗೆ ಕೊರೋನಾ ಟೆಸ್ಟ್ ಮಾಡಿ ರೀತಿ ಫೇಕ್ ಟೆಸ್ಟ್ ಮಾಡಿದ್ದ..ಬಳಿಕ ಸೆಪ್ಟೆಂಬರ್ 3ಕ್ಕೆ ಮತ್ತೆ ಬಂದಿದ್ದ ಮೊಹಮ್ಮದ್, ರುಚಿಗೆ ಪಾಸಿಟಿವ್ ಆಗಿದೆ. ಆಕೆ ಪತಿ ವಿಕ್ಕಿಗೆ ನೆಗೆಟಿವ್ ಅಂತ ಸುಳ್ಳು ಹೇಳಿ, ಸ್ನೇಹಿತೆ ರುಚಿಯನ್ನು ಅಂಬುಲೆನ್ಸ್ ಅಲ್ಲಿ ಕರೆದೊಯ್ದಿದ್ದ. ಮೂರು ದಿನಗಳ ಬಳಿಕ ಆಕೆ ಆಸ್ಪತ್ರೆಗೂ ಅಡ್ಮಿಟ್ ಆಗಿಲ್ಲ ಫೋನ್ ಸ್ವಿಚ್ ಆಫ್ ಇದೆ ಅಂತ ಆಕೆ ಗಂಡ ವಿಕ್ಕಿ ಬೊಮ್ಮನಹಳ್ಳಿ ಪೊಲೀಸರಿಗೆ ಕಿಡ್ನಾಪ್ ಕೇಸ್ ದಾಖಲಿಸಿದ್ದ.

ಪ್ರಕರಣ ದಾಖಲಾಗ್ತಿದ್ದಂತೆ‌ ಎಚ್ಚೆತ್ತ ಬೊಮ್ಮನಹಳ್ಳಿ ಪೊಲೀಸರು ಲೇಡಿ ರುಚಿ ಫೋನ್ ಟ್ರಾಕ್ ಮಾಡಿದ್ರು. ಬಳಿಕ‌ ಅಂಬುಲೆನ್ಸ್ ಬುಕ್ ಮಾಡೋಕೆ ಬಳಸಿದ್ದ ಮೊಹಮ್ಮದ್ ನ ಫೋನ್ ನಂಬರ್ ಕೂಡ ಟ್ರಾಕ್ ಆಗಿತ್ತು..ಆಗ ಆ ಮಾಹಿತಿ ಜಾಡು ಹಿಡಿದಾಗ, ರುಚಿ ದೆಹಲಿಯಲ್ಲಿರೋದು ಪತ್ತೆಯಾಗಿತ್ತು. ಬಳಿಕ ಆಕೆಯನ್ನು ಸಂಪರ್ಕ ಮಾಡಿದ ಪೊಲೀಸರೇ ಶಾಕ್ ಆಗಿದ್ರು..ಯಾಕೆಂದ್ರೆ, ಸರ್ , ನಾನು ಕಿಡ್ನಾಪ್ ಆಗಿಲ್ಲ. ಗಂಡನ ಕಿರುಕುಳಕ್ಕೆ ಬೇಸತ್ತು, ಸ್ನೇಹಿತನ ಸಹಾಯ ಪಡೆದು ನಾನೇ ಬಂದಿದ್ದಿನಿ. ಕೋವಿಡ್ ಪಾಸಿಟಿವ್ ಅಂತ ನಾವೇ ಸುಳ್ಳು ಹೇಳಿದ್ದಿವಿ ಅಂತ ರುಚಿ ತಪ್ಪೊಪ್ಪಿಕೊಂಡಿದ್ಳು.

ಇದೆಲ್ಲಾ ಆದ ಬಳಿಕ ಬೊಮ್ಮನಹಳ್ಳಿ ಪೊಲೀಸರು ಪತಿ‌ ವಿಕ್ಕಿ,ಪತ್ನಿ ರುಚಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ರುಚಿಗೆ ಪೊಲೀಸರು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ..

- Advertisement -
spot_img

Latest News

error: Content is protected !!