Friday, May 10, 2024
Homeಇತರಉಡುಪಿ: ಕಣ್ಣು ದೃಷ್ಟಿ ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿಗೆ ನೆರವಾದ ಸಮಾಜಸೇವಕರು...!

ಉಡುಪಿ: ಕಣ್ಣು ದೃಷ್ಟಿ ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿಗೆ ನೆರವಾದ ಸಮಾಜಸೇವಕರು…!

spot_img
- Advertisement -
- Advertisement -

ಉಡುಪಿ: ವ್ಯಕ್ತಿಯೋರ್ವರು ಉಡುಪಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕಂಡು ಬಂದಿದ್ದು, ಅವರ ರಕ್ಷಣೆಗೆ ಸಮಾಜ ಸೇವಕರೊಬ್ಬರು ಮುಂದಾಗಿದ್ದಾರೆ.

ಉಡುಪಿಯ ಅದಮಾರು ಮಠ- ಪೇಜಾವರ ಮಠದ ನಡುವಿನ ಓಣಿ ರಸ್ತೆಯಲ್ಲಿ ಎರಡು ಕಣ್ಣುಗಳ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ಯುವಕನ ಮಾಹಿತಿ ಕಲೆ ಹಾಕಿದಾಗ ಹೆಸರು ಗಣೇಶ್ ಗೌಡ, ತಂದೆ ರಾಮಣ್ಣ ಗೌಡ, ಕೇನ್ಯ ಗ್ರಾಮ- ಪಂಜ- ಸುಳ್ಯದ ನಿವಾಸಿ ಎಂದು ಹೇಳಿಕೊಂಡಿದ್ದಾನೆಂದು ಗೊತ್ತಾಗಿದೆ.

ಸಮಾಜಸೇವಕ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರುಗಳು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ ಘಟನೆ ಗುರುವಾರ ನಡೆದಿದೆ. ಸಂಬಂಧಿಕರು ತುರ್ತಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸಮಾಜಸೇವಕರು ವಿನಂತಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!