- Advertisement -
- Advertisement -
ಉಡುಪಿ: ವ್ಯಕ್ತಿಯೋರ್ವರು ಉಡುಪಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕಂಡು ಬಂದಿದ್ದು, ಅವರ ರಕ್ಷಣೆಗೆ ಸಮಾಜ ಸೇವಕರೊಬ್ಬರು ಮುಂದಾಗಿದ್ದಾರೆ.
ಉಡುಪಿಯ ಅದಮಾರು ಮಠ- ಪೇಜಾವರ ಮಠದ ನಡುವಿನ ಓಣಿ ರಸ್ತೆಯಲ್ಲಿ ಎರಡು ಕಣ್ಣುಗಳ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ಯುವಕನ ಮಾಹಿತಿ ಕಲೆ ಹಾಕಿದಾಗ ಹೆಸರು ಗಣೇಶ್ ಗೌಡ, ತಂದೆ ರಾಮಣ್ಣ ಗೌಡ, ಕೇನ್ಯ ಗ್ರಾಮ- ಪಂಜ- ಸುಳ್ಯದ ನಿವಾಸಿ ಎಂದು ಹೇಳಿಕೊಂಡಿದ್ದಾನೆಂದು ಗೊತ್ತಾಗಿದೆ.
ಸಮಾಜಸೇವಕ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರುಗಳು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ ಘಟನೆ ಗುರುವಾರ ನಡೆದಿದೆ. ಸಂಬಂಧಿಕರು ತುರ್ತಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸಮಾಜಸೇವಕರು ವಿನಂತಿಸಿಕೊಂಡಿದ್ದಾರೆ.
- Advertisement -