- Advertisement -
- Advertisement -
ಬೆಳ್ತಂಗಡಿ : ನಿಲ್ಲಿಸಿದ್ದ ಓಮಿನಿ ಕಾರಿನೊಳಗೆ ನಾಗರಹಾವು ಹೋಗಿದ್ದು ಇದನ್ನು ಸ್ಥಳೀಯರು ನೋಡಿ ಸ್ನೇಕ್ ಅಶೋಕ್ ಲಾಯಿಲ ಅವರಿಗೆ ಮಾಹಿತಿ ನೀಡಿ ನಂತರ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ ಘಟನೆ ಬೆಳ್ತಂಗಡಿಯ ಅಯ್ಯಪ್ಪ ಗುಡಿ ಬಳಿ ನಡೆದಿದೆ.
ಬೆಳ್ತಂಗಡಿ ನಗರದ ಅಯ್ಯಪ್ಪ ಗುಡಿ ಬಳಿಯ ಸೊಸೈಟಿ ಗೆ ಓಮಿನಿ ಕಾರಿನಲ್ಲಿ ಬಂದಿದ್ದ ಕಂಪ್ಯೂಟರ್ ರಿಪೇರಿ ಮಾಡಿವರು ಪಾರ್ಕ್ ಮಾಡಿ ಹೋಗಿದ್ದರು ಈ ವೇಳೆ ಇಲಿಯನ್ನು ಓಡಿಸಿಕೊಂಡು ರಸ್ತೆ ದಾಟಿ ಬಂದ ಸುಮಾರು 5 ಅಡಿ ಉದ್ದದ ನಾಗರಹಾವು ಜನರನ್ನು ನೋಡಿ ಭಯದಲ್ಲಿ ಪಕ್ಕದಲ್ಲಿದ್ದ ಓಮಿನಿ ಕಾರಿನೊಳಗೆ ಹೋಗಿದ್ದ ಇದನ್ನು ಸ್ಥಳೀಯರು ನೋಡಿ ಸ್ನೇಕ್ ಅಶೋಕ್ ಲಾಯಿಲ ಇವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
- Advertisement -