Friday, April 19, 2024
HomeUncategorizedಮಲಗುವ ವೇಳೆ ಈ ಬಗ್ಗೆ ಗಮನ ನೀಡಿದ್ರೆ ಬದಲಾಗುತ್ತೆ ʼಅದೃಷ್ಟ

ಮಲಗುವ ವೇಳೆ ಈ ಬಗ್ಗೆ ಗಮನ ನೀಡಿದ್ರೆ ಬದಲಾಗುತ್ತೆ ʼಅದೃಷ್ಟ

spot_img
- Advertisement -
- Advertisement -

ಚೆನ್ನಾಗಿ ನಿದ್ರೆ ಮಾಡಲು ಪ್ರತಿಯೊಬ್ಬರು ಬಯಸ್ತಾರೆ. ಸುಖ ನಿದ್ರೆಯಿಲ್ಲದೆ ಪರಿತಪಿಸುವವರು ಸಾಕಷ್ಟು ಮಂದಿ. ಶಾಂತ ಪ್ರದೇಶ, ಸುಂದರ ಹಾಸಿಗೆಯಿದ್ದರೂ ಅನೇಕ ಬಾರಿ ಸುಖ ನಿದ್ರೆ ಹತ್ತಿರ ಸುಳಿಯೋದಿಲ್ಲ. ಇದಕ್ಕೆ ವಾಸ್ತುದೋಷವೂ ಕಾರಣವಾಗುತ್ತದೆ. ಕೆಲವೊಂದು ಉಪಾಯಗಳನ್ನು ಅನುಸರಿಸಿದ್ರೆ ಸುಖ ನಿದ್ರೆ ನಿಮ್ಮನ್ನು ಆವರಿಸುತ್ತದೆ.

  • ಒಂಟಿ ಮನೆಯಲ್ಲಿ ಒಬ್ಬರೇ ನಿದ್ರೆ ಮಾಡಬಾರದು. ದೇವಸ್ಥಾನ ಹಾಗೂ ಚಿತಾಗಾರದಲ್ಲಿ ಕೂಡ ನಿದ್ರೆ ಮಾಡಬಾರದು.
  • ನಿದ್ರೆ ಮಾಡಿದ ವ್ಯಕ್ತಿಯನ್ನು ಅಚಾನಕ್ಕಾಗಿ ಏಳಿಸಬಾರದು.
  • ವಿದ್ಯಾರ್ಥಿಗಳು, ಉದ್ಯೋಗಿಗಳು, ದ್ವಾರಪಾಲಕರು ತುಂಬಾ ಹೊತ್ತು ಮಲಗಬಾರದು.
  • ಗಾಢ ಕತ್ತಲಿರುವ ಕೋಣೆಯಲ್ಲಿ ಮಲಗಬಾರದು.
  • ಒದ್ದೆ ಕಾಲಿನಲ್ಲಿ ಹಾಸಿಗೆ ಮೇಲೆ ಮಲಗಬಾರದು. ಒಣಗಿದ ಕಾಲಿನಲ್ಲಿ ಮಲಗಬೇಕು. ಇಲ್ಲವಾದ್ರೆ ಲಕ್ಷ್ಮಿ ಮುನಿಸಿಕೊಳ್ತಾಳೆ.
  • ಹರಿದ ಹಾಸಿಗೆಯಲ್ಲಿ ಮಲಗಬಾರದು.
  • ನಗ್ನವಾಗಿ ಎಂದೂ ನಿದ್ರೆ ಮಾಡಬಾರದು.
  • ಹಗಲಿನಲ್ಲಿ ಮಲಗಬಾರದು. ಜೇಷ್ಠ ಮಾಸದಲ್ಲಿ ಮಧ್ಯಾಹ್ನ ಕೊಂಚ ಹೊತ್ತು ಮಲಗಬಹುದು.
  • ಸೂರ್ಯಾಸ್ತವಾದ ಮೂರು ಗಂಟೆ ನಂತ್ರ ಮಲಗಬೇಕು.
  • ಎಡ ಭಾಗಕ್ಕೆ ವಾಲಿ ಮಲಗುವುದು ಶುಭಕರ.
  • ಹಾಸಿಗೆ ಮೇಲೆ ಕುಳಿತು ಆಹಾರ ಸೇವನೆ ಮಾಡುವುದು ಅಶುಭ.
  • ಮಲಗಿ ಓದಬಾರದು.
  • ತಿಲಕವಿಟ್ಟು ಮಲಗುವುದು ಅಶುಭ. ಹಾಗಾಗಿ ಮಲಗುವ ಮುನ್ನ ತಿಲಕವನ್ನು ತೆಗೆಯಬೇಕು.

- Advertisement -
spot_img

Latest News

error: Content is protected !!