Thursday, May 16, 2024
Homeತಾಜಾ ಸುದ್ದಿರಾಜ್ಯ ಸರ್ಕಾರಗಳಿಗೆ ಪ್ರಧಾನಿಯಿಂದ ಮಹತ್ವದ ಸೂಚನೆ- ಲಸಿಕೆ ವಿತರಣೆಗೆ ಸರ್ವಸನ್ನದ್ಧರಾಗಿ ಎಂದ ನರೇಂದ್ರ ಮೋದಿ

ರಾಜ್ಯ ಸರ್ಕಾರಗಳಿಗೆ ಪ್ರಧಾನಿಯಿಂದ ಮಹತ್ವದ ಸೂಚನೆ- ಲಸಿಕೆ ವಿತರಣೆಗೆ ಸರ್ವಸನ್ನದ್ಧರಾಗಿ ಎಂದ ನರೇಂದ್ರ ಮೋದಿ

spot_img
- Advertisement -
- Advertisement -

ನವದೆಹಲಿ: ಕೋವಿಡ್ ಲಸಿಕೆ ಕುರಿತಾಗಿ ಹಲವು ಮಾತುಕತೆಗಳ ಮಧ್ಯೆ ರಾಜ್ಯ ಸರ್ಕಾರಗಳಿಗೆ ಪ್ರಧಾನಿ ಮಹತ್ವದ ಮಾಹಿತಿ ನೀಡಿದ್ದಾರೆ. ಯಾವುದೇ ಸಂದರ್ಭದಲ್ಲಾದರೂ ಕೊರೋನಾ ಲಸಿಕೆ ಬರಬಹುದು. ಹಾಗಾಗಿ ಲಸಿಕೆ ವಿತರಣೆ ಬಗ್ಗೆ ಸರ್ವಸನ್ನದ್ಧರಾಗುವಂತೆ ರಾಜ್ಯ ಸರ್ಕಾರಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿದ್ದು, ರಾಜ್ಯಗಳ ಕೊರೊನಾ ಸ್ಥಿತಿಗತಿ, ಲಸಿಕೆ ಬಗ್ಗೆ ಚರ್ಚೆ ನಡೆಸಿದರು.ವಿಜ್ಞಾನಿಗಳು ಅವರ ಕೆಲಸಗಳನ್ನು ಬಹಳ ತೀವ್ರಗತಿಯಲ್ಲಿ ಮಾಡುತ್ತಿದ್ದು
ಶೀಘ್ರದಲ್ಲಿಯೇ ಕೊರೊನಾ ಲಸಿಕೆ ಲಭ್ಯವಾಗಲಿದೆ ಸಿದ್ಧತೆ ಮಾಡಿಕೊಳ್ಳಿ ಎಂದು ತಿಳಿಸಿದರು.
ಇದೇವೇಳೆ ಲಸಿಕೆ ದೊರೆವವರೆಗೆ ಜಾಗರೂಕರಾಗಿರಿ, ನಿರ್ಲಕ್ಷ್ಯ ಬೇಡ ಎಂದು ಹೇಳಿದರು.

- Advertisement -
spot_img

Latest News

error: Content is protected !!