Wednesday, June 24, 2026
Homeತಾಜಾ ಸುದ್ದಿರಾತ್ರೋರಾತ್ರಿ ಶಿಂಧೆ ಕ್ಯಾಂಪ್‌ನಿಂದ ತಪ್ಪಿಸಿಕೊಂಡು ಠಾಕ್ರೆ ಜೊತೆ ಸೇರಿದ ಶಿವಸೇನೆ ಶಾಸಕ: ನನ್ನನ್ನು ಕಿಡ್ನಾಪ್‌ ಮಾಡಿದ್ರು...

ರಾತ್ರೋರಾತ್ರಿ ಶಿಂಧೆ ಕ್ಯಾಂಪ್‌ನಿಂದ ತಪ್ಪಿಸಿಕೊಂಡು ಠಾಕ್ರೆ ಜೊತೆ ಸೇರಿದ ಶಿವಸೇನೆ ಶಾಸಕ: ನನ್ನನ್ನು ಕಿಡ್ನಾಪ್‌ ಮಾಡಿದ್ರು ಎಂದ ಶಾಸಕ ನಿತಿನ್‌ ದೇಶ್‌ಮುಖ್‌

- Advertisement -
- Advertisement -

ಮಹಾರಾಷ್ಟ್ರದಲ್ಲಿ ನಡೆಯತ್ತಿರುವ ರಾಜಕೀಯ ಬಿಕ್ಕಟ್ಟು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಬಂಡಾಯ ನಾಯಕಕ ಏಕನಾಥ ಶಿಂಧೆ ಅವರ ಜತೆಗಿದ್ದ ಶಿವಸೇನೆ ಶಾಸಜಕ ನಿತಿನ್‌ ದೇಶ್‌ಮುಖ್‌ ಇದೀಗ ಏಕಾಏಕಿ ಪ್ರತ್ಯಕ್ಷರಾಗಿದ್ದಾರೆ. ಅಲ್ಲದೇ ತಾನು ಉದ್ಧವ್‌ ಠಾಕ್ರೆ ಪರ ಎಂದು ಹೇಳಿಕೊಂಡಿದ್ದಾರೆ.

ಶಿಂಧೆ ಕ್ಯಾಂಪ್‌ನಿಂದ ತಪ್ಪಿಸಿಕೊಂಡು ಬಂದಿದ್ದಾಗಿ ನಿತಿನ್‌ ದೇಶ್‌ಮುಖ್‌ ಹೇಳಿಕೆ ನೀಡಿದ್ದಾರೆ. ನನ್ನನ್ನು ಕಿಡ್ನಾಪ್‌ ಮಾಡಿಕೊಂಡು ಗುಜರಾತ್‌ನ ಸೂರತ್‌ಗೆ ಕರೆದುಕೊಡು ಹೋಗಿದ್ದರು. ಅವರಿಂದ ನಾನು ತಪ್ಪಿಸಿಕೊಂಡು ಬಂದೆ ಎಂದು ನಿತಿನ್‌ ದೇಶ್‌ಮುಖ್‌ ಹೇಳಿದ್ದಾರೆ.

ಶಿಂಧೆ ಅವರ ಗುಂಪಿನಿಂದ ನಾನು ಮಧ್ಯರಾತ್ರಿ ತಪ್ಪಿಸಿಕೊಂಡು ಮುಂಜಾನೆ 3 ಗಂಟೆ ವೇಳೆ ರಸ್ತೆ ಬದಿಗೆ ಬಂದು, ವಾಹನಕ್ಕಾಗಿ ಕಾಯುತ್ತಿದ್ದೆ. ಈ ವೇಳೆ ನೂರಾರು ಪೊಲೀಸರು ಬಂದು ನನನ್ನು ಸುತ್ತುವರಿದು ಆಸ್ಪತ್ರೆ ಸೇರಿಸಿದರು. ನನಗೆ ಹೃದಯಾಘಾತ ಆಗಿದೆ ನಾಟಕ ಮಾಡಿ ನನ್ನನ್ನು ಉಪಚರಿಸಿದಂತೆ ನಾಟಕ ಮಾಡಿದರು. ನನಗೆ ಏನೂ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಅವರು ನನ್ನನ್ನು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು’ ಎಂದು ದೇಶ್‌ಮುಖ್‌ ತಿಳಿಸಿದ್ದಾರೆ.

ಇದೇ ವೇಳೆ ತಾವು ಯಾರ ಬಣದಲ್ಲಿ ಗುರುತಿಸಿಕೊಂಡಿದ್ದೀರಿ ಎನ್ನುವ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತವಾಗಿಯೂ ನಾನು ಉದ್ಧವ್‌ ಠಾಕ್ರೆ ಅವರ ಜತೆಯಲ್ಲೇ ಇದ್ದೇನೆ ಎಂದು ಹೇಳಿದ್ದಾರೆ.

ಮಂಗಳವಾರ ಏಕನಾಥ ಶಿಂಧೆ ಗುಂಪಿನೊಂದಿಗೆ ಸೇರಿಕೊಂಡು ಗುಜರಾತ್‌ ಸೇರಿಕೊಂಡಿದ್ದ ನಿತಿನ್‌ ದೇಶ್‌ಮುಖ್‌ ಅವರು ಕಾಣೆಯಾಗಿದ್ದಾರೆ ಎಂದು ಅವರ ಪತ್ನಿ ಪೊಲೀಸ್‌ ದೂರು ನೀಡಿದ್ದರು. ಇದೀಗ ನಿತಿನ್‌ ಅವರು ದೇಶ್‌ಮುಖ್‌ ಅವರ ಗುಂಪಿನಿಂದ ತಪ್ಪಿಸಿಕೊಂಡು ಠಾಕ್ರೆ ಪಾಳಯ ಸೇರಿಕೊಂಡಿದ್ದಾರೆ.

ಬಲಾಪುರ ವಿಧಾಸಸಭಾ ಕ್ಷೇತ್ರದ ಶಾಸಕರಾಗಿರುವ ಆವರ ಪ್ರಾಣಕ್ಕೆ ಅಪಾಯ ಇದೆ ಎಂದು ಪತ್ನಿ ದೂರಿನಲ್ಲಿ ಹೇಳಿದ್ದರು. ಜೂನ್‌ 20 ರಂದು ಸಂಜೆ ಏಳು ಗಂಟೆಗೆ ನಾನು ಅವರನ್ನು ಕೊನೆಯದಾಗಿ ಫೋನ್‌ನಲ್ಲಿ ಮಾತನಾಡಿದ್ದೆ, ಬಳಿಕ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅವನ್ನು ಹುಡುಕಿಕೊಡಿ ಎಮದು ಅಕೋಲಾ ಠಾಣೆಯಲ್ಲಿ ಪತ್ನಿ ಪ್ರಾಂಜಲಿ ದೂರು ಸಲ್ಲಿಕೆ ಮಾಡಿದ್ದರು.

- Advertisement -

Latest News

error: Content is protected !!