- Advertisement -
- Advertisement -
ಕೊಕ್ಕಡ: ಉಜಿರೆ SDM ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ್ದ ಹಿರಿಯ ವಿದ್ಯಾರ್ಥಿನಿ ದಿವ್ಯಾ ಮೆದುಳಿನ ಕ್ಯಾನ್ಸರ್ ನಿಂದಾಗಿ ಕೊನೆಯುಸಿರೆಳೆದಿದ್ದಾರೆ.
ನಾರ್ಯ ಮೂಲದ ದಿವ್ಯಾ, ಕೊಕ್ಕಡದ ಕೆಂಗುಡೇಲ್ ನ ಶಿವಪ್ರಸಾದ್ ಗೌಡರನ್ನು ವಿವಾಹವಾಗಿದ್ದು, ಈ ಜೋಡಿಗೆ ಒಂದೂವರೆ ವರ್ಷದ ಗಂಡು ಮಗುವಿದೆ.
ಕಳೆದ ಕೆಲ ತಿಂಗಳ ಹಿಂದೆ ಇವರಿಗೆ ಕ್ಯಾನ್ಸರ್ ಇರುವುದು ಮನೆಯವರಿಗೆ ತಿಳಿದಿದ್ದು, ಮೊದಲು ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು. ಈ ಚಿಕಿತ್ಸೆಗೆ ದಿವ್ಯಾರ ಅರೋಗ್ಯ ಸ್ಪಂದಿಸದ ಕಾರಣ ಕೇರಳದಿಂದ ಆಯುರ್ವೇದಿಕ್ ಚಿಕಿತ್ಸೆ ಪಡೆಯುತ್ತಿದ್ದರು. ಈ ಚಿಕಿತ್ಸೆಯಲ್ಲಿ ದಿವ್ಯಾ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣುತ್ತಿದ್ದ ಸಮಯದಲ್ಲೆ ನಿನ್ನೆ ಹಠಾತ್ತನೆ ಕಾಣಿಸಿಕೊಂಡ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.
- Advertisement -