ಬೆಳ್ತಂಗಡಿ : ಶಾಲಾ ಕಟ್ಟಡದ ಪಕ್ಕದ ಪ್ಲ್ಯಾಟ್ ನ ಬಾತ್ ರೂಂ ಗೆ ಹೋದ ಶಾಲಾ ವಿದ್ಯಾರ್ಥಿನಿಯೊಬ್ಬಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿಯ ಗೇರುಕಟ್ಟೆಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆಯಲ್ಲಿರುವ ಮನ್ಸಾರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಇಂದು ಶಾಲೆಗೆ ಬರುವಾಗ ಏಕಾಏಕಿ ಶಾಲಾ ಸಮೀಪದ ಪಕ್ಕದಲ್ಲಿರುವ ಇಮಾನ್ ಆರ್ಕೇಡ್ ಪ್ಲ್ಯಾಟ್ ನಲ್ಲಿ ಒಂದು ಕುಟುಂಬ ವಾಸ ಮಾಡುವ ಮನೆಗೆ ಹೋಗಿ ಮಹಿಳೆಯೊಬ್ಬರಲ್ಲಿ ನನಗೆ ಬಾತ್ ರೂಂಗೆ ಹೋಗಬೇಕು ಅಂತ ಕೇಳಿಕೊಂಡು ಹೋಗಿದ್ದಳು, ತಡವಾದರೂ ಬಾಗಿಲು ಬಡಿದಾಗ ಯಾವುದೇ ಶಬ್ದ ಬಾರದೆ ವಿದ್ಯಾರ್ಥಿನಿ ಹೊರ ಬರದಿದ್ದಾಗ ಮಹಿಳೆ ಸ್ಥಳೀಯರಿಗೆ ಬೊಬ್ಬೆ ಹಾಕಿ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳೀಯರು ಬಂದು ಬಾಗಿಲು ಮುರಿದಾಗ ವಿದ್ಯಾರ್ಥಿನಿಯ ಬೂರ್ಖಾ ವೆಲ್ ನಿಂದ ಟ್ಯಾಪ್ ಗೆ ನೇಣುಬಿಗಿದುಕೊಂಡಿದ್ದಳು ತಕ್ಷಣ ಖಾಸಗಿ ಆಸ್ಪತ್ರೆಗೆ ಸಾಗಿಸಿದಾಗ ಮೃತಪಟ್ಟಿದ್ದಳು.
ಬೆಳ್ತಂಗಡಿ ತಾಲೂಕಿನ ಊರುವಾಳು ಗ್ರಾಮದ ಕುಪ್ಪೆಟ್ಟಿ ನಿವಾಸಿ ದಿನಸಿ ಉದ್ಯಮಿ ಅಬ್ದುಲ್ ರಜಾಕ್ ಅವರ ಹತ್ತನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಫೀಪಾ (16) ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ, ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
.