- Advertisement -
- Advertisement -
ಕೊಡಗು: ಹಲವು ಕಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಯೊಬ್ಬ ಪೊಲೀಸರ ವಶದಲ್ಲಿದ್ದಾಗಲೇ ಎಸ್ಕೇಪ್ ಆಗಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ರಂಷಾನ್ ಪರಾರಿಯಾಗಿರುವ ಆರೋಪಿ.
ರಂಷಾನ್ ನನ್ನು ಇತ್ತೀಚೆಗೆ ಕೊಡಗು ಪೋಲೀಸರು ಜೀಪ್ ಕಳ್ಳತನದ ಆರೋಪದಡಿಯಲ್ಲಿ ಕಾಸರಗೋಡಿನಲ್ಲಿ ಬಂಧಿಸಿ ಮಡಿಕೇರಿ ಜೈಲಿಗಟ್ಟಿದ್ದರು. ಕೇರಳದ ವಿವಿದೆಡೆ ಕಳ್ಳತನದ ಪ್ರಕರಣಗಳಲ್ಲಿ ಬೇಕಾಗಿದ್ದ. ಇಂದು ಬೆಳಿಗ್ಗೆ 9-45 ಕ್ಕೆ ಮಡಿಕೇರಿ ಜೈಲಿನಿಂದ ಹೊರಗೆ ಕೇರಳ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾನೆ..
ಈತ ಬೇರೆ ವಾಹನವನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಸಾಧ್ಯತೆ ಇದ್ದು, ಎಲ್ಲಾದರು ಕಂಡು ಬಂದರೆ ತಕ್ಷಣ ಸಮೀಪದ ಪೋಲಿಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ,
- Advertisement -