ಉಡುಪಿ: ಪರ್ಕಳ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪುನಃಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಎ. 27ರಿಂದ ಮೇ 11ರ ವರೆಗೆ ನಡೆಯಲಿದ್ದು, ಎ. 27ರ ಸಂಜೆ 4ಕ್ಕೆ ಹಸುರು ಹೊರೆಕಾಣಿಕೆ ಮೆರವಣಿಗೆಗೆ ಪರ್ಕಳ ವಿಘ್ನೇಶ್ವರ ಸಭಾಭವನದಲ್ಲಿ ದೇವಸ್ಥಾನದ ತಂತ್ರಿ ಪಾಡಿಗಾರ ಶ್ರೀನಿವಾಸ ತಂತ್ರಿ ಉಪಸ್ಥಿತಿಯಲ್ಲಿ ಹೆರ್ಗ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ವೇ|ಮೂ| ಎಚ್. ರಾಘವೇಂದ್ರ ತಂತ್ರಿ ಚಾಲನೆ ನೀಡಲಿದ್ದಾರೆ.
ಮೆರವಣಿಗೆಯು ಕೀಲು ಕುದುರೆ, ನಾಸಿಕ್ ಬ್ಯಾಂಡ್, ವಿವಿಧ ಸ್ತಬ್ಧಚಿತ್ರಗಳೊಂದಿಗೆ ಪರ್ಕಳ ಪೇಟೆ ಮೂಲಕ ದೇವಸ್ಥಾನ ತಲುಪಲಿದೆ.
ಎ. 28 ಸೋಮವಾರದಂದು ಆಲಯ ಪರಿಗ್ರಹ, ತೋರಣ-ಉಗ್ರಾಣ ಮುಹೂರ್ತ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 5ರಿಂದ ವಾಸ್ತುಹೋಮ, ಅಂಕುರಾರೋಪಣ ನಡೆಯಲಿದೆ.
ಎ. 29ರ ಮಂಗಳವಾರದಂದು ಬೆಳಗ್ಗೆ 8ರಿಂದ ಗಣಯಾಗ, ಅಥರ್ವಶೀರ್ಷ ಗಣಯಾಗ, ಸಂಜೆ 5ರಿಂದ ಸುದರ್ಶನ ಹೋಮ, ಮಂಟಪ ಸಂಸ್ಕಾರ ನಡೆಯಲಿದೆ.
ಎ. 30ರ ಬುಧವಾರದಂದು ಬೆಳಗ್ಗೆ 8ರಿಂದ ಸಂಜೀವಿನಿ ಮೃತ್ಯುಂಜಯ ಯಾಗ, ಸಂಜೆ 4ರಿಂದ ಮಹಾಲಿಂಗೇಶ್ವರ, ಮಹಾಗಣಪತಿ, ಶಾಸ್ತಾರ, ನವಗ್ರಹಗಳು, ವ್ಯಾಘ್ರ ಚಾಮುಂಡಿ ದೈವದ ಬಿಂಬಾಭಿವಾಸ, ಶಿರಸ್ತತ್ತ್ವಹೋಮ, ರತ್ನನ್ಯಾಸ ಪೀಠಾಧಿವಾಸ, ಗರ್ಭಗೃಹಾಧಿವಾಸ ಜಗರಗಲಿದೆ.
ಮೇ 1ರ ಗುರುವಾರದಂದು ಬೆಳಗ್ಗೆ 6ರಿಂದ ಪೂರ್ಣಮಾನ ನವಗ್ರಹಯಾಗ, 8.05ಕ್ಕೆ ಮಹಾಲಿಂಗೇಶ್ವರ ದೇವರ ಬಿಂಬ ಪ್ರತಿಷ್ಠೆ, ಮಹಾಗಣಪತಿ, ಶಾಸ್ತಾರ, ನವಗ್ರಹಗಳ ಬಿಂಬ ಪ್ರತಿಷ್ಠೆ, ವ್ಯಾಘ್ರ ಚಾಮುಂಡಿ ದೈವದ ಬಿಂಬಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಸಂಜೆ 5ರಿಂದ ದುರ್ಗಾನಮಸ್ಕಾರ ಪೂಜೆ, ನಾಗ, ಬ್ರಹ್ಮ, ನಂದಿಗೋಣ, ವ್ಯಾಘ್ರಚಾಮುಂಡಿ ಪರಿವಾರಗಳಿಗೆ ಕಲಶಾಧಿವಾಸ, ಸಂಜೆ 5.30ರಿಂದ ನಡೆಯಲಿರುವ ಸುಧರ್ಮ ಸಭೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು.
ಮೇ 2ರ ಶುಕ್ರವಾರದಂದು ಬೆಳಗ್ಗೆ 8ರಿಂದ ಶಾಂತಿಹೋಮ, ಚಂಡಿಕಾ ಹೋಮ, ನಾಗ ಸಾನ್ನಿಧ್ಯದಲ್ಲಿ ಕಲಶಾಭಿಷೇಕ, ಬ್ರಹ್ಮ, ನಾಗ, ರಕ್ತೇಶ್ವರೀ, ನಂದಿಗೋಣ, ವ್ಯಾಘ್ರ ಚಾಮುಂಡಿ ಸಾನ್ನಿಧ್ಯದಲ್ಲಿ ಕಲಶಾಭಿಷೇಕ, ಸಂಜೆ 4ರಿಂದ ದಿಶಾ ಹೋಮ, ಆಶ್ಲೇಷಾಬಲಿ, ಶ್ರೀಚಕ್ರಪೂಜೆ, ಮಹಾಗಣಪತಿ, ಮಹಿಷಮರ್ದಿನಿ, ಶಾಸ್ತಾರ ದೇವರಿಗೆ ಕಲಶಾಧಿವಾಸ, ರಾತ್ರಿ ಪೂಜೆ, ಸಂಜೆ ನಡೆಯುವ ಧಾರ್ಮಿಕ ಸಭೆಯನ್ನು ನಾಗಪಾತ್ರಿ ರಾಮಚಂದ್ರ ಕುಂಜಿತ್ತಾಯ ಉದ್ಘಾಟಿಸಲಿದ್ದಾರೆ.
ಮೇ 3ರ ಶನಿವಾರದಂದು ಬೆಳಗ್ಗೆ 7ರಿಂದ ರುದ್ರಯಾಗ, ಅದ್ಭುತಶಾಂತಿ, ಮಹಾಗಣಪತಿ, ಮಹಿಷಮರ್ದಿನಿ, ಶಾಸ್ತಾರ ದೇವರಿಗೆ ಕಲಶಾಭಿಷೇಕ, ಮಹಾಲಿಂಗೇಶ್ವರ ದೇವರಿಗೆ ತತ್ತÌಕಲಶಾಭಿಷೇಕ, ಪ್ರಸನ್ನಪೂಜೆ, ಸಂಜೆ 4ರಿಂದ ಮಹಾಲಿಂಗೇಶ್ವರ ದೇವರಿಗೆ 25 ದ್ರವ್ಯಸಹಿತ ಏಕೋತ್ತರ ಸಹಸ್ರ ಕಲಶಾಧಿವಾಸ, ಭದ್ರಕ ಮಂಡಲಪೂಜೆ, ಸಂಜೆಯ ಧಾರ್ಮಿಕ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ಉದ್ಘಾಟಿಸಲಿದ್ದಾರೆ.
ಮೇ 4ರ ಭಾನುವಾರದಂದು ಬೆಳಗ್ಗೆ 6ರಿಂದ ವಿಶೇಷ ಶಾಂತಿ ಹೋಮ, ಮಹಾಲಿಂಗೇಶ್ವರ ದೇವರಿಗೆ ಕಲಶಾಭಿಷೇಕ, 8.5ಕ್ಕೆ ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ನ್ಯಾಸಪೂಜೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 7ಕ್ಕೆ ರಾತ್ರಿಪೂಜೆ, ಧಾರ್ಮಿಕ ಸಭೆಯಲ್ಲಿ ಸೋದೆ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಮೇ 5ರ ಬೆಳಗ್ಗೆ 7ರಿಂದ ಮಹಾಪೂಜೆ, ಮಂತ್ರಾಕ್ಷತೆ, ರಾತ್ರಿ ದೀಪೋತ್ಸವ, ಸಂಜೆ 5ಕ್ಕೆ ಧರ್ಮದರ್ಶಿ ಸಮಾವೇಶ ನಡೆಯಲಿದೆ. ಮೇ 6ರಿಂದ 10ರ ತನಕ ರಥೋತ್ಸವ ನಡೆಯಲಿದ್ದು, ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನಡೆಯಲಿವೆ.