Friday, April 19, 2024
Homeಕರಾವಳಿಉಡುಪಿಕಿಟ್ ಪಡೆಯಲು ಬಂದಿದ್ದ ಮಹಿಳೆ ಮೇಲೆ ಆತ್ಯಾಚಾರಕ್ಕೆ ಯತ್ನ

ಕಿಟ್ ಪಡೆಯಲು ಬಂದಿದ್ದ ಮಹಿಳೆ ಮೇಲೆ ಆತ್ಯಾಚಾರಕ್ಕೆ ಯತ್ನ

spot_img
- Advertisement -
- Advertisement -

ಬ್ರಹ್ಮಾವರ : ದಿನಸಿ ಕಿಟ್ ಪಡೆಯಲು ಬಂದಿದ್ದ ಮಹಿಳೆಯೊಬ್ಬರ ಮೇಲೆ ಆತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಂದು ಮಹಿಳೆಯೊಬ್ಬರು ಲಾಕ್‌ಡೌನ್‌ನಿಂದಾಗಿ ಸ್ಥಳೀಯರು ಹಂಚುತ್ತಿರುವ ಕಿಟ್ ಪಡೆಯಲು ಸಂತಕಟ್ಟೆಯಿಂದ ಬ್ರಹ್ಮಾವರದ ಕುಂಜಾಲಿಗೆ ಆಗಮಿಸಿದ್ದರು, ಇದೇ ವೇಳೇ ಆ ಮಹಿಳೆ ದಿನಸಿ ಕಿಟ್ ಪಡೆದುಕೊಂಡು ಬ್ರಹ್ಮಾವರದ ಕುಂಜಾಲು ಜಂಕ್ಷನ್ ಬಳಿಯ ನಿರ್ಜನ ರಸ್ತೆಯಲ್ಲಿ ಸಾಗುತ್ತಿದ್ದಾಗ ಬೈಕ್ ನಲ್ಲಿ ಅಪರಿಚಿತ ವ್ಯಕ್ತಿ ಬಂದಿದ್ದಾನೆ. ಈ ವೇಳೆ ಲಿಫ್ಟ್ ಕೊಡುವದಾಗಿ ಹೇಳಿ ಮಹಿಳೆಯನ್ನ ಬೈಕಿನಲ್ಲಿ ಹತ್ತಿಸಿಕೊಂಡು ದೂರ ಹೋದ ಬಳಿಕ ಕಾಡಿಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಪ್ರಕರಣ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪರಾರಿಯಾಗಿರುವ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!