- Advertisement -
- Advertisement -
ಬೆಳ್ತಂಗಡಿ : ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಗುರುವಾಯನಕೆರೆ- ಬೆಳ್ತಂಗಡಿ ರಸ್ತೆಯಲ್ಲಿ ಗುಂಡಿಗಳು ಬಿದ್ದು ವಾಹನ ಸವಾರರು ಪರದಾಡುವ ಸ್ಥಿತಿಯಿದ್ದು ಇಂದು ಬೆಳ್ತಂಗಡಿ ದ್ವಾರಕಾ ಡ್ರೈವಿಂಗ್ ಸ್ಕೂಲ್ ಮಾಲೀಕ ಯಶವಂತ್ ಬಾಳಿಗ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಬೆಳ್ತಂಗಡಿ – ಗುರುವಾಯನಕೆರೆ ರಸ್ತೆ ಮಳೆಗೆ ಸಂಪೂರ್ಣ ಹೊಂಡಗಳು ಬಿದ್ದು ಪ್ರಯಾಣಿಕರಿಗೆ ಹಾಗೂ ವಾಹನಗಳಿಗೆ ತೊಂದರೆಯಾಗಿದ್ದು ಇದರಿಂದ ಬೇಸತ್ತು ಬೆಳ್ತಂಗಡಿ ದ್ವಾರಕಾ ಡ್ರೈವಿಂಗ್ ಸ್ಕೂಲ್ ಮಾಲೀಕರಾದ ಯಶವಂತ್ ಬಾಳಿಗ ನೇತೃತ್ವದಲ್ಲಿ ವಕೀಲರಾದ ಮನೋಹರ್ ಇಳಂತಿಲ, ಶೇಖರ್ ಲಾಯಿಲ, ಅಲ್ವಿನ್ , ನವೀನ್ ಗೌಡ , ಅನಿಲ್ ಪೈ, ಅಲ್ತಾಫ್ , ಪ್ರಜ್ವಲ್ ಜೈನ್ ಮತ್ತಿತರರು ಸೇರಿ ರಸ್ತೆ ಸರಿಪಡಿಸಬೇಕಾಗಿ ಅರ್ಥ ಗಂಟೆಗೂ ಹೆಚ್ಚು ಕಾಲ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.
- Advertisement -