Monday, April 29, 2024
Homeಕರಾವಳಿಮಂಗಳೂರು; ಬಾವಿ ಕೊರೆಯಲು ಸ್ಫೋಟಕ ಬಳಕೆ; ಆಘಾತಕ್ಕೊಳಗಾಗಿ ಆಸ್ಪತ್ರೆ ಸೇರಿದ ಗರ್ಭಿಣಿ

ಮಂಗಳೂರು; ಬಾವಿ ಕೊರೆಯಲು ಸ್ಫೋಟಕ ಬಳಕೆ; ಆಘಾತಕ್ಕೊಳಗಾಗಿ ಆಸ್ಪತ್ರೆ ಸೇರಿದ ಗರ್ಭಿಣಿ

spot_img
- Advertisement -
- Advertisement -

ಮಂಗಳೂರು; ಬಾವಿ ಕೊರೆಯಲು ಸ್ಫೋಟಕ ಬಳಸಿದ ಪರಿಣಾಮ ಅದರ ಸದ್ದಿಗೆ ಆಘಾತಕ್ಕೊಳಗಾಗಿ ಗರ್ಭಿಣಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ  ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಕಬೈಲು ಎಂಬಲ್ಲಿ ನಡೆದಿದೆ.

ಬಡಕಬೈಲು ನಿವಾಸಿ ಹರೀಶ್ ಎಂಬವರ ಪತ್ನಿ ಸಾವಿತ್ರಿ ಶಬ್ದದಿಂದ ಆಘಾತಕ್ಕೆ ಒಳಗಾದವರು.ಇವರ ಮನೆಯ 100ಮೀ ಅಂತರದಲ್ಲಿ ಫಾರುಕ್ ಎಂಬವರು ಕಳೆದ ಎರಡು ವಾರದಿಂದ ಬಾವಿ ತೋಡುವ ಕೆಲಸ ಮಾಡುತ್ತಿದ್ದರು.ಬಾವಿ ತೋಡುವ ಮಧ್ಯೆ ಸಿಗುವ ಬಂಡೆಕಲ್ಲುಗಳನ್ನು ಒಡೆಯಲು ಸ್ಫೋಟಕ ಬಳಸಿದ್ದಾರೆ.

ಈ ವೇಳೆ ಪಕ್ಕದ ಮನೆಯಲ್ಲಿದ್ದ ಸಾವಿತ್ರಿ ಅವರು ದೊಡ್ಡ ಸದ್ದಿನಿಂದ ಆಘಾತಕ್ಕೆ ಒಳಗಾಗಿ ಪ್ರಜ್ಞೆ ತಪ್ಪಿ ನೆಲಕ್ಕುರುಳಿದ್ದಾರೆ.ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಒಳರೋಗಿಯಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!