- Advertisement -
- Advertisement -
ಪುತ್ತೂರು : ಬೆಳ್ಳಾರೆ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ನಾಲ್ಕು ಜನರ ಆರೋಪಿಗಳು ನಾಪತ್ತೆಯಾಗಿದ್ದು ಅವರಿಗಾಗಿ ಎನ್.ಐ.ಎ ಅಧಿಕಾರಿಗಳು ನಾಲ್ಕು ಜನ ಆರೋಪಿಗಳ ಪತ್ತೆಗೆ ಒಟ್ಟು 14 ಲಕ್ಷ ಹಣವನ್ನು ಘೋಷಣೆ ಮಾಡಿದ್ದಾರೆ. ಪುತ್ತೂರು ,ಸುಳ್ಯ ,ಬೆಳ್ಳಾರೆಯಲ್ಲಿ ಬಸ್ ನಿಲ್ದಾಣ , ರೈಲ್ವೆ ನಿಲ್ದಾಣದ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕು ಆರೋಪಿಗಳ ಫೋಟೋ ಇರುವ ಪೋಸ್ಟರ್ ಅಂಟಿಸಿ ಪತ್ತೆಗೆ ಸಹಕರಿಸಲು ಮನವಿ ಮಾಡಿದ್ದಾರೆ.
ಎನ್.ಐ.ಎ ತಂಡದಿಂದ ಪುತ್ತೂರಿನಲ್ಲಿ ಶೋಧ: ಎನ್.ಐ.ಎ ಯ ಆರು ಜನರ ತಂಡ ಟೆಕ್ನಿಕಲ್ ಮಾಹಿತಿ ಆಧಾರದಲ್ಲಿ ಇಂದು ಪುತ್ತೂರು ಸುತ್ತಮುತ್ತ ಶೋಧ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.
- Advertisement -