Thursday, June 26, 2025
Homeಕರಾವಳಿಉಡುಪಿಉಡುಪಿ: ಕರ್ಕಶ ಹಾರ್ನ್ ಹಾಕಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದ ದುಬೈ ನೋಂದಾಯಿತ 3 ಕಾರುಗಳು ಪೊಲೀಸರ...

ಉಡುಪಿ: ಕರ್ಕಶ ಹಾರ್ನ್ ಹಾಕಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದ ದುಬೈ ನೋಂದಾಯಿತ 3 ಕಾರುಗಳು ಪೊಲೀಸರ ವಶಕ್ಕೆ

spot_img
- Advertisement -
- Advertisement -

ಉಡುಪಿ: ಕರ್ಕಶ ಹಾರ್ನ್ ಹಾಕಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದ ದುಬೈ ನೊಂದಾಯಿತ 3 ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದು ದಂಡ ಹಾಕಿರುವ ಘಟನೆ ಮಣಿಪಾಲದ ನಗರದ ರಜತಾದ್ರಿ ರಸ್ತೆಯಲ್ಲಿ ನಡೆದಿದೆ.

ಕೇರಳ ಮೂಲದವರು ದುಬೈ ನೋಂದಾಯಿತ ಮೂರು ಕಾರುಗಳಲ್ಲಿ  ಗೋವಾಕ್ಕೆ ಹೋಗಿ ವಾಪಾಸ್ಸು ಕೇರಳ ಹೋಗುತ್ತಿದ್ದರು.ಈ ಮಧ್ಯೆ ಮಣಿಪಾಲ ದಲ್ಲಿರುವ ಗೆಳೆಯರನ್ನು ಭೇಟಿಯಾಗಲು ಬಂದಿದ್ದು, ಈ ವೇಳೆ ಇವರು ಅಜಾಗರೂಕತೆಯಿಂದ ಕರ್ಕಶ ಹಾರ್ನ್ ಬಳಸಿ ಕಾರನ್ನು ಚಲಾಯಿಸಿರುವ ಬಗ್ಗೆ ಸಾರ್ವಜನಿಕರಿಂದ ಪೊಲೀಸರಿಗೆ ದೂರು ಬಂದಿತ್ತು.

ಅದರ ಆಧಾರದ ಮೇಲೆ ಮಣಿಪಾಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಅದರಂತೆ ಸ್ಥಳದಲ್ಲಿದ್ದ ದುಬೈ ನೋಂದಾಯಿತ 3 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ದುಬೈ ನೋಂದಾಯಿತ ಈ ಕಾರುಗಳ ದಾಖಲೆಗಳ ಪರಿಶೀಲನೆ ಬಗ್ಗೆ ಪೊಲೀಸರು ಉಡುಪಿ ಆರ್‌ಟಿಓಗೆ ಪತ್ರ ಬರೆದಿದ್ದು, ಅದರಂತೆ ಆರ್‌ಟಿಓ ಈ ಮೂರು ಕಾರುಗಳ ದಾಖಲಾತಿಗಳನ್ನು ಪರಿಶೀಲಿಸಿ, ಎಲ್ಲ ದಾಖಲಾತಿಗಳು ಕಾನೂನು ಬದ್ಧವಾಗಿ ಸರಿಯಾಗಿದೆಂದು ತಿಳಿಸಿದ್ದಾರೆ.ನಂತರ ಈ ಕಾರುಗಳನ್ನು ಅಜಾಗರೂಕವಾಗಿ ಚಾಲನೆ ಮಾಡಿರುವ ಬಗ್ಗೆ ಹಾಗೂ ಕರ್ಕಶ ಹಾರ್ನ್ ಬಳಸಿರುವ ಬಗ್ಗೆ ಪ್ರತಿ ಕಾರಿಗೆ 1500ರೂ. ನಂತೆ ದಂಡ ವಿಧಿಸಿ, ಬಿಡುಗಡೆಗೊಳಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!