Tuesday, April 23, 2024
Homeಅಪರಾಧಸುರತ್ಕಲ್: ನಾಗಬನ ಧ್ವಂಸಗೊಳಿಸಿದವ ಸುಳಿವು ಪೊಲೀಸರಿಗೆ ದೊರೆತಿದೆ ಇದು ಬಿಜೆಪಿ ಸರಕಾರಕ್ಕೆ ಕೆಟ್ಟ ಹೆಸರು ತರುವ...

ಸುರತ್ಕಲ್: ನಾಗಬನ ಧ್ವಂಸಗೊಳಿಸಿದವ ಸುಳಿವು ಪೊಲೀಸರಿಗೆ ದೊರೆತಿದೆ ಇದು ಬಿಜೆಪಿ ಸರಕಾರಕ್ಕೆ ಕೆಟ್ಟ ಹೆಸರು ತರುವ ಸಂಚು: ಡಾ. ಭರತ್ ಶೆಟ್ಟಿ ವೈ

spot_img
- Advertisement -
- Advertisement -

ಸುರತ್ಕಲ್: ಕೂಳೂರು ಮತ್ತು ಕೋಡಿಕಲ್ ನಾಗಬನಗಳಲ್ಲಿ ಅಲ್ಲಿನ ಆರಾಧನಾ ನಾಗನ ಕಲ್ಲುಗಳನ್ನು ಭಗ್ನಗೊಳಿಸಿ ಎಸೆದು ಕೋಮು ಸೌಹಾರ್ದತೆ ಕದಡಲು ಸಂಚು ಹೂಡಿರುವುದು ಬಯಲಾಗಿದ್ದು, ಆರೋಪಿಗಳ ಸುಳಿವು ಪೊಲೀಸರಿಗೆ ದೊರೆತಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಶುಕ್ರವಾರ ತಿಳಿಸಿದ್ದಾರೆ.

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಇಂದು ಶಾಂತಿಯುತವಾಗಿದ್ದು, ಜಿಲ್ಲೆಯಲ್ಲೂ ಯಾವುದೇ ಅಹಿತಕರ ಘಟನೆ ಗೆ ನಮ್ಮ ಸರಕಾರ ಆಸ್ಪದ ನೀಡಿಲ್ಲ. ಹೀಗಾಗಿ ಶಾಂತಿ ಸಾಮರಸ್ಯ ವಾತಾವರಣ ಕೆಡಿಸಿ ಬಿಜೆಪಿ ಸರಕಾರಕ್ಕೆ ಕೆಟ್ಟ ಹೆಸರು ತರುವ ಸಂಚು ಇದಾಗಿದೆ ಎಂದು ಹೇಳಿದರು.

ಈ ಕೃತ್ಯ ಎಸಗಿದವರ ಹಿಂದೆ ಇರುವ ಸಂಘಟನೆ, ವ್ಯಕ್ತಿಗಳ ಮೇಲೂ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದು ಶಾಸಕರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

- Advertisement -
spot_img

Latest News

error: Content is protected !!