- Advertisement -
- Advertisement -
ಕಾಪು: ಹೆಜಮಾಡಿಯ ಯಶವಂತ ಶೆಟ್ಟಿ ಎಂಬವವರು
ನಿರುದ್ಯೋಗದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .
ಯಶವಂತ ಶೆಟ್ಟಿ ( 54 ) ಈ ಹಿಂದೆ ಮುಂಬೈಯಲ್ಲಿ ಹೋಟೆಲ್ ಮಾಡಿಕೊಂಡಿದ್ದು , ಕಳೆದ 3 ವರ್ಷದ ಹಿಂದೆ ಲಾಕ್ಡೌನ್ ಕಾರಣ ತಮ್ಮ ಊರಾದ ಕಾಪುವಿನ ಹೆಜಮಾಡಿಯಲ್ಲಿರುವ ಅವರ ಮನೆಗೆ ವಾಪಸಾಗಿದ್ದರು .
ನಂತರ ಯಾವುದೇ ಕೆಲಸವಿಲ್ಲದೇ ಮನೆಯಲ್ಲಿಯೇ ಇದ್ದು , ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು . ಈ ವಿಚಾರಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
- Advertisement -