- Advertisement -
- Advertisement -
ಬೆಂಗಳೂರು: ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿರುವ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಕನ್ನಡ ಚಲನಚಿತ್ರ ‘ಜೇಮ್ಸ್’ ಪ್ರದರ್ಶನಕ್ಕೆ ಯಾವುದೇ ಅಡೆತಡೆಗಳಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬೊಮ್ಮಾಯಿ, ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೊಂದಿಗೆ ಚರ್ಚಿಸಿದ್ದೇನೆ ಎಂದರು.
“ಈಗಾಗಲೇ ಫಿಲಂ ಚೇಂಬರ್ ಜೊತೆ ಮಾತನಾಡಿದ್ದೇನೆ. ‘ಜೇಮ್ಸ್’ ಚಿತ್ರ ಪ್ರದರ್ಶನಕ್ಕೆ ಏನಾದರೂ ತೊಂದರೆಯಾದರೆ ಅದನ್ನು ಬಗೆಹರಿಸುವ ಅಧಿಕಾರ ಸಂಬಂಧಪಟ್ಟ ನಿರ್ಮಾಪಕರು ಮತ್ತು ಥಿಯೇಟರ್ಗಳಿಗೆ ಇದೆ, ನಟ ಶಿವರಾಜಕುಮಾರ್ ಅವರೊಂದಿಗೂ ಮಾತನಾಡಿದ್ದೇನೆ. ಅವರಿಗೆ ಯಾವುದೇ ಸಮಸ್ಯೆ ಎದುರಾದರೆ ನನ್ನ ಗಮನಕ್ಕೆ ಅಥವಾ ಫಿಲಂ ಚೇಂಬರ್ ಗಮನಕ್ಕೆ ತರಲು ತಿಳಿಸಿದ್ದೇನೆ ಎಂದರು.
- Advertisement -