ಬೆಂಗಳೂರು : ಕೊರೊನಾದಿಂದಾಗಿ ನನ್ನ ಮದುವೆ ಹೀಗಿರಬೇಕ ಹಾಗಿರಬೇಕು ಅಂತಾ ಅಂದುಕೊಂಡಿದ್ದ ಅದೆಷ್ಟೋ ಮಂದಿಯ ಪ್ಲ್ಯಾನ್ ಉಲ್ಟಾ ಆಗಿದ್ದು ನಮಗೆಲ್ಲಾ ಗೊತ್ತೇ ಇದೆ. ಸಾವಿರಾರು ಜನರ ಸಮ್ಮುಖದಲ್ಲಿ ನಡೆಯಬೇಕಿದ್ದ ಅದೆಷ್ಟೋ ಮದುವೆಗಳು ಕೇವಲ 10-15 ಮಂದಿಗೆ ಸೀಮಿತವಾಗಿದ್ದು ನಿಮಗೆಲ್ಲಾ ಗೊತ್ತೇ ಇದೆ.
ಆದರೆ ಇದೆಲ್ಲದರ ಮಧ್ಯೆ ಒಂದಷ್ಟು ಮಂದಿ ತಮ್ಮ ಮದುವೆ, ನಿಶ್ಚಿತಾರ್ಥಗಳನ್ನು ಮುಂದೂಡಿದ್ದರು. ಇಂತಹ ಮಂದಿಗೆ ಇದೀಗ ಶುಭ ಸುದ್ದಿಯೊಂದು ಸಿಕ್ಕಿದೆ. ಅನ್ಲಾಕ್ 5.0 ನಿಯಮಾವಳಿ ಪ್ರಕಾರ 200 ಜನರು ಮಿತಿಗೊಳಪಡಿಸಿ ಕಲ್ಯಾಣ ಮಂಟಪಗಳಲ್ಲಿ ಮದುವೆ, ನಿಶ್ಚಿತಾರ್ಥ ಮುಂತಾದ ಶುಭಸಮಾರಂಭಗಳಿಗೆ ಅವಕಾಶ ನೀಡಿಲಾಗಿದ್ದು, ಜನರು ನಿರಾಂತಕವಾಗಿ ತಮ್ಮ ಮಕ್ಕಳ ವಿವಾಹ, ಇತ್ಯಾದಿ ಸಮಾರಂಭಗಳನ್ನು ಮುಕ್ತವಾಗಿ ಮಾಡಬಹುದಾಗಿದೆ.
ಆದರೆ ಕೋವಿಡ್ -19 ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಬಳಸುವುದು ಈ ಕನಿಷ್ಠ ಮಾರ್ಗಸೂಚಿಗಳನ್ನು ಪಾಲಿಸಲೇಬೇಕಾಗುತ್ತದೆ. ಗ್ರಾಮೀಣ ಪ್ರದೇಶ, ಪಟ್ಟಣ ಪ್ರದೇಶ ಹಾಗೂ ನಗರಪ್ರದೇಶಗಳಲ್ಲಿ ಕೂಡ ವಿವಾಹ ಮುಂತಾದ ಶುಭಸಮಾರಂಭಗಳು ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದವು. ಈಗ ಕೇಂದ್ರ ಸರ್ಕಾರ ಅನುಮತಿ ನೀಡಿರುವುದರಿಂದ ಜನರು ಯಾವುದೇ ಆತಂಕವಿಲ್ಲದೆ ಕಾರ್ಯಕ್ರಮಗಳನ್ನು ನೆರವೇರಿಸಬಹುದಾಗಿದೆ.