Sunday, May 12, 2024
Homeತಾಜಾ ಸುದ್ದಿನರೇಶ್ ಜೊತೆ ಮದುವೆ ಆಗಿಲ್ಲ: ನನಗೂ ಸುಚೇಂದ್ರ ಪ್ರಸಾದ್‌ ಅವರಿಗೂ ಮದುವೆ ಆಗಿಲ್ಲ: ಮಾಧ್ಯಮಗಳ ಮುಂದೆ...

ನರೇಶ್ ಜೊತೆ ಮದುವೆ ಆಗಿಲ್ಲ: ನನಗೂ ಸುಚೇಂದ್ರ ಪ್ರಸಾದ್‌ ಅವರಿಗೂ ಮದುವೆ ಆಗಿಲ್ಲ: ಮಾಧ್ಯಮಗಳ ಮುಂದೆ ಪವಿತ್ರಾ ಲೋಕೇಶ್ ಮಾತು

spot_img
- Advertisement -
- Advertisement -

ಸುಮಾರು ವರ್ಷಗಳಿಂದ ನಟಿ ಪವಿತ್ರಾ ಲೋಕೇಶ್ ಹಾಗೂ ಸುಚೇಂದ್ರ ಪ್ರಸಾದ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಷ್ಟೂ ವರ್ಷಗಳಲ್ಲಿ ಪವಿತ್ರಾ ಲೋಕೇಶ್ ಆಗಲಿ, ಸುಚೇಂದ್ರ ಪ್ರಸಾದ್ ಆಗಲಿ ಯಾವುದೇ ವಿವಾದಕ್ಕೆ ಸಿಲುಕಿರಲಿಲ್ಲ. ಆದ್ರೀಗ, ಪಕ್ಕದ ತೆಲುಗು ಚಿತ್ರರಂಗದಲ್ಲಿ ಹಾಗೂ ಕನ್ನಡ ಸಿನಿ ಅಂಗಳದಲ್ಲಿ ಪವಿತ್ರಾ ಲೋಕೇಶ್ ಗಾಸಿಪ್‌ ಕಾಲಂನಲ್ಲಿ ಸದ್ದು ಮಾಡುತ್ತಿದ್ದಾರೆ. ಅದಕ್ಕೆಲ್ಲಾ ಕಾರಣ ತೆಲುಗು ನಟ ನರೇಶ್..!

ಟಾಲಿವುಡ್ ಸೂಪರ್ ಸ್ಟಾರ್ ಕೃಷ್ಣ ಅವರ ಪುತ್ರ ನರೇಶ್. ಈ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮದುವೆಯಾಗಲಿದ್ದಾರಂತೆ ಎಂಬ ಅಂತೆ-ಕಂತೆ ಕೆಲವು ದಿನಗಳಿಂದ ಕೇಳಿಬರುತ್ತಲೇ ಇದೆ. ಹೀಗಿರುವಾಗಲೇ, ನಟ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಕನ್ನಡ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿರುದ್ಧ ರಮ್ಯಾ ರಘುಪತಿ ಕೆಲವು ಆರೋಪಗಳನ್ನ ಮಾಡಿದ್ದಾರೆ.

ಹೀಗಾಗಿ, ಇಂದು ಪವಿತ್ರಾ ಲೋಕೇಶ್ ಮಾಧ್ಯಮಗಳ ಮುಂದೆ ಬಂದು ತಮ್ಮ ಮನದ ಮಾತುಗಳನ್ನ ಹೊರಹಾಕಿದರು. ಈ ವೇಳೆ ಸುಚೇಂದ್ರ ಪ್ರಸಾದ್‌ ಅವರ ಬಗ್ಗೆಯೂ ಪವಿತ್ರಾ ಲೋಕೇಶ್ ಮಾತನಾಡಿದರು. ಸುಚೇಂದ್ರ ಪ್ರಸಾದ್‌ಗೂ ತಮಗೂ ಮದುವೆಯೇ ಆಗಿಲ್ಲ ಎಂದು ಪವಿತ್ರಾ ಲೋಕೇಶ್ ಹೇಳಿದರು.

ಹಾಗೇ, ನನಗೆ ದುಡ್ಡಿನ ಆಸೆ ಇದ್ದಿದ್ದರೆ, ಸುಚೇಂದ್ರ ಪ್ರಸಾದ್‌ ಜೊತೆಗೆ ಒಂದು ವರ್ಷವೂ ಇರುತ್ತಿರಲಿಲ್ಲ. ನಾನು ಆರ್ಟಿಸ್ಟ್. ನೋಟೆಡ್ ಪರ್ಸನ್. ನಾನು ರಸ್ತೆಯಲ್ಲಿ ನಡೆದುಕೊಂಡು ಓಡಾಡಲು ಆಗುವುದಿಲ್ಲ. ನನಗೊಂದು ಕಾರು ಬೇಕು. ಅದನ್ನ ಆಸೆ ಅಂತ ಸುಚೇಂದ್ರ ಪ್ರಸಾದ್ ಕರೆದರೆ ಅದು ಮೂರ್ಖತನ ಎಂದರು ನಟಿ ಪವಿತ್ರಾ ಲೋಕೇಶ್.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ನನಗೆ ಗೊತ್ತು. ಇದೇ ಕಾರಣಕ್ಕೆ ನಾನು ಸೈಬರ್ ಪೊಲೀಸರಿಗೆ ದೂರು ನೀಡಿದ್ದೇನೆ. ಅವರ ಬಗ್ಗೆ ವಿಚಾರಣೆ ಮಾಡ್ತೀವಿ ಅಂತ ಪೊಲೀಸರು ಆಶ್ವಾಸನೆ ಕೊಟ್ಟಿದ್ದಾರೆ. ನರೇಶ್ ಜೊತೆಗೆ ನಾನು ಮದುವೆಯಾಗಿದ್ದೇನೆ ಅಂತ ಯಾರು ಹೇಳಿದ್ದು? ಯಾವ ಆಧಾರದ ಮೇಲೆ ನನ್ನ ಹಾಗೂ ನರೇಶ್ ಮದುವೆ ನಡೆದಿದೆ ಅಂತ ಹೇಳ್ತಿದ್ದೀರಾ? ಇದರಿಂದ ನನ್ನ ಮಾನ ಮರ್ಯಾದೆಗೆ ಧಕ್ಕೆ ಆಗಿದೆ. ಹೀಗಾಗಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದೇನೆ’’ ಎಂದರು.

ಇನ್ನು ಸುಚೇಂದ್ರ ಪ್ರಸಾದ್ ಜೊತೆಗೆ ನಾನಿಲ್ಲ. ನಾನು ಅವರಿಂದ ಬೇರೆಯಾಗಿದ್ದೇನೆ. ಬೇರೆ ಫ್ಲಾಟ್‌ನಲ್ಲಿ 2017ರಿಂದ ವಾಸಿಸುತ್ತಿದ್ದೇನೆ. ಯಾಕೆ ನಾವು ಜೊತೆಗಿಲ್ಲ ಅನ್ನೋದು ನನ್ನ ವೈಯಕ್ತಿಕ ವಿಷಯ’’ನನಗೆ ದುಡ್ಡಿನ ಆಸೆ ಇದೆ ಅಂತ ಹೇಳೋಕೆ ಸುಚೇಂದ್ರ ಪ್ರಸಾದ್ ಅವರಿಗೆ ಯಾವುದೇ ಹಕ್ಕಿಲ್ಲ. ಯಾಕಂದ್ರೆ, ನಾನು ಅವರ ಜೊತೆಗಿದ್ದಾಗ ಅವರ ಹತ್ತಿರ ಏನೂ ಇರಲಿಲ್ಲ. ಅವರು ಬಹಳಷ್ಟು ಓದಿಕೊಂಡಿದ್ದಾರೆ, ತಿಳ್ಕೊಂಡಿದ್ದಾರೆ. ಇದರ ಬಗ್ಗೆ ನನಗೆ ಗೌರವ ಇದೆ. ನಾನು ಅವರನ್ನ ದುಡ್ಡಿನಿಂದ ಅಳಿದಿದ್ದರೆ, ನಾನು ಅವರೊಂದಿಗೆ 11 ವರ್ಷ ಇರ್ತಿರ್ಲಿಲ್ಲ!’’ ನಾನು ಸುಚೇಂದ್ರ ಪ್ರಸಾದ್ ಅವರೊಂದಿಗೆ ಮದುವೆ ಆಗಿಲ್ಲ. ಮದುವೆ ಆಗದೇ ಇರೋದಕ್ಕೂ ಅವರೇ ಕಾರಣ. ಅವರು ಯಾವ ನಿರ್ಧಾರವನ್ನೂ ಮಾಡಲಿಲ್ಲ ಅವಾಗ. ಎಲ್ಲವನ್ನೂ ನಾನೇ ನಿರ್ಧರಿಸಬೇಕಾಯಿತು. ದುಡ್ಡಿಗಾಗಿ ಇದ್ದಿದ್ದರೆ ಒಂದು ವರ್ಷವೂ ನಾನು ಅವರ ಜೊತೆ ಇರ್ತಿರ್ಲಿಲ್ಲ’’

- Advertisement -
spot_img

Latest News

error: Content is protected !!