- Advertisement -
- Advertisement -
ಉಡುಪಿ:ಬೆಳ್ಳಾರೆಯ ಘಟನೆಯಿಂದ ಸಹಜವಾಗಿ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿತ್ತು. ಸಿಎಂ ಒಂದು ವರ್ಷದ ಆಡಳಿತದ ವಿಜಯೋತ್ಸವ ರದ್ದು ಮಾಡಿ, ಬೆಳ್ಳಾರೆಗೆ ಭೇಟಿ ನೀಡಿದ್ದಾರೆ. ಪಕ್ಷ ಯಾವ ಯಾವ ತೀರ್ಮಾನವನ್ನು ಮಾಡಬೇಕು ಅದನ್ನು ಕೈಗೊಂಡಿದೆ.ಪಕ್ಷ ಯಾವ ಕಾರ್ಯಕರ್ತರನ್ನು ಕಡೆಗಣಿಸಲ್ಲ ಎಂದು ಉಡುಪಿಯಲ್ಲಿ ಮೀನುಗಾರಿಕಾ ಹಾಗೂ ಬಂದರು ಸಚಿವ ಎಸ್ ಅಂಗಾರ ಹೇಳಿಕೆ ನೀಡಿದ್ದಾರೆ.
ಎನ್.ಐ.ಎ ಗೆ ತಕ್ಷಣ ತನಿಖೆಯ ಜವಾಬ್ದಾರಿ ನೀಡಲಾಗಿದೆ. ಈಗಾಗಲೇ ಹಲವಾರು ಆರೋಪಿಗಳ ಬಂಧನವಾಗಿದೆ. ನೈಜ ಆರೋಪಿಗಳನ್ನು ಬಂಧಿಸುವ ಕೆಲಸ ಮಾಡುತ್ತೇವೆ. ರಾಜೀನಾಮೆ ಕೊಟ್ಟವರು ವಾಪಾಸು ಬಂದು ಪಾರ್ಟಿಗೆ ತೊಂದರೆ ಮಾಡುದಿಲ್ಲ ಎಂದಿದ್ದಾರೆ.ಆ ಘಟನೆಯಿಂದ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗುವುದಿಲ್ಲ ಎಂದಿದ್ದಾರೆ.
- Advertisement -