Sunday, May 5, 2024
Homeಮಹಾನ್ಯೂಸ್ನಿವೃತ್ತ ಶಿಕ್ಷಕ ಕಡಂದಲೆ ಪರಾರಿ ಪ್ರಭಾಕರ್ ಎಲ್ ಶೆಟ್ಟಿ ವಿಧಿವಶ

ನಿವೃತ್ತ ಶಿಕ್ಷಕ ಕಡಂದಲೆ ಪರಾರಿ ಪ್ರಭಾಕರ್ ಎಲ್ ಶೆಟ್ಟಿ ವಿಧಿವಶ

spot_img
- Advertisement -
- Advertisement -

ಮುಂಬೈ: ನಿವೃತ್ತ ಶಿಕ್ಷಕ, ನಗರದ ಹಿರಿಯ ಹೋಟೆಲ್ ಉದ್ಯಮಿ , ಪುತ್ತಿಗೆ ಗುತ್ತು ಕಡಂದಲೆ ಪರಾರಿ ಪ್ರಭಾಕರ್ ಎಲ್ ಶೆಟ್ಟಿ ಅವರು ಜುಲೈ 1 ರಂದು ವಿಧಿವಶರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಅವರು ದಹಿಸರ್ ಪಶ್ಚಿಮ ದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೂಲತಃ ಮೂಡಬಿದ್ರೆ ಸಮೀಪದ ಪುತ್ತಿಗೆ ಗುತ್ತು ಕಡಂದಲೆ ಪರಾರಿ ಮನೆತನದವರಾದ ಪ್ರಭಾಕರ್ ಶೆಟ್ಟಿ  ಕರ್ನಾಟಕ  ಧರ್ಮಾರ್ಥ ರಾತ್ರಿ ಹೈಸ್ಕೂಲ್, ಅಗರ್ವಾಲ್ ವಿದ್ಯಾಸಂಸ್ಥೆ ವಡಲಾ, ಗುರುನಾನನ್ ವಿದ್ಯಾಲಯ ಸಯಾನ್, ಕರ್ನಾಟಕ ಪ್ರೊಗ್ರೆಸಿವ್ ರಾತ್ರಿ ಫ್ರೀ ಹೈಸ್ಕೂಲ್ ಪರೇಲ್  ಇನ್ನಿತರ ಶಿಕ್ಷಣ ಸಂಸ್ಥೆಗಳಲ್ಲಿ ಹಲವು ದಶಕಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಡಿವೈನ್ ಸ್ಪಾರ್ಕ್ ಧಾರ್ಮಿಕ ಸಂಸ್ಥೆಯಲ್ಲೂ ಸಕ್ರೀಯರಾಗಿದ್ದರು.ಫೆಡರೇಷನ್ ಆಫ್ ಹೋಟೆಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೆಶನ್ಸ್ ಇದರ ಪ್ರಧಾನ ಕಾರ್ಯದರ್ಶಿಯಾಗಿ , ಭಿವಂಡಿ  ಹೋಟೆಲ್ ಆ್ಯಂಡ್ ರೆಸ್ಟೋರೆಂಟ್ಸ್ ಓನರ್ಸ್ ಅಸೋಸಿಯೇಶನ್ ಸ್ಥಾಪಕ ಅಧ್ಯಕ್ಷರಾಗಿ, ಮುಂಬೈನ ಅನೇಕ ಸಂಘ ಸಂಸ್ಥೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!