Saturday, May 18, 2024
Homeಕರಾವಳಿಬೆಳ್ತಂಗಡಿ: ಹಾಲಿನ ಡೈರಿಗೆ ಹಾಲು ಹಾಕಲು ಹೋದ ವೃದ್ಧೆ ಅನುಮಾನಾಸ್ಪದವಾಗಿ ನಾಪತ್ತೆ

ಬೆಳ್ತಂಗಡಿ: ಹಾಲಿನ ಡೈರಿಗೆ ಹಾಲು ಹಾಕಲು ಹೋದ ವೃದ್ಧೆ ಅನುಮಾನಾಸ್ಪದವಾಗಿ ನಾಪತ್ತೆ

spot_img
- Advertisement -
- Advertisement -

ಬೆಳ್ತಂಗಡಿ;    ಹಾಲಿನ ಡೈರಿಗೆ ಹಾಲು ಹಾಕಲು ಹೋದ ವೃದ್ಧೆ ನಾಪತ್ತೆಯಾಗಿರುವ ಘಟನೆ ಮೇಲಂಬೆಟ್ಟು ಗ್ರಾಮದ ಪಡಿಬೆಟ್ಟು ಎಂಬಲ್ಲಿ ನಡೆದಿದೆ.ಯುಮುನಾ ಅಚಾರ್ಯ(63) ನಾಪತ್ತೆಯಾಗಿರುವ ವೃದ್ಧೆ.

ಬೆಳಗ್ಗೆ ಸುಮಾರು 6:45 ಕ್ಕೆ ಹಾಲು ನೀಡಲು ಮೇಲಂಬೆಟ್ಟು ಡೈರಿಗೆ   ಹೋದ ಯಮುನಾ ಆಚಾರ್ಯ ವಾಪಾಸ್ ಮನೆಗೆ ಬಂದಿಲ್ಲ.
ಪಡಿಬೆಟ್ಟುವಿನ ಅವರ ಮನೆಯಿಂದ ಮೇಲಂತಬೆಟ್ಟು ಹಾಲಿನ ಡೈರಿಗೆ 2 ಕಿಮೀ ಇದ್ದು, ಪಡಿಬೆಟ್ಟು ರಸ್ತೆಯಲ್ಲಿ ಎರಡು ಚಪ್ಪಲಿ , ರಕ್ತದ ಕಲೆ ಕಂಡು ಬಂದಿದ್ದು, ಹಾಲಿನ ಕ್ಯಾನ್  ನಾಪತ್ತೆಯಾಗಿದ್ದು ಸಾಕಷ್ಟು ಅನುಮಾನ ಮೂಡಿಸಿದೆ.

ಬೆಳ್ತಂಗಡಿ ಪೊಲೀಸರು ಸಿಸಿಕ್ಯಾಮರ ದೃಶ್ಯಾವಳಿಗಳನ್ನು  ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!