- Advertisement -
- Advertisement -
ಬೆಳ್ತಂಗಡಿ; ಹಾಲಿನ ಡೈರಿಗೆ ಹಾಲು ಹಾಕಲು ಹೋದ ವೃದ್ಧೆ ನಾಪತ್ತೆಯಾಗಿರುವ ಘಟನೆ ಮೇಲಂಬೆಟ್ಟು ಗ್ರಾಮದ ಪಡಿಬೆಟ್ಟು ಎಂಬಲ್ಲಿ ನಡೆದಿದೆ.ಯುಮುನಾ ಅಚಾರ್ಯ(63) ನಾಪತ್ತೆಯಾಗಿರುವ ವೃದ್ಧೆ.
ಬೆಳಗ್ಗೆ ಸುಮಾರು 6:45 ಕ್ಕೆ ಹಾಲು ನೀಡಲು ಮೇಲಂಬೆಟ್ಟು ಡೈರಿಗೆ ಹೋದ ಯಮುನಾ ಆಚಾರ್ಯ ವಾಪಾಸ್ ಮನೆಗೆ ಬಂದಿಲ್ಲ.
ಪಡಿಬೆಟ್ಟುವಿನ ಅವರ ಮನೆಯಿಂದ ಮೇಲಂತಬೆಟ್ಟು ಹಾಲಿನ ಡೈರಿಗೆ 2 ಕಿಮೀ ಇದ್ದು, ಪಡಿಬೆಟ್ಟು ರಸ್ತೆಯಲ್ಲಿ ಎರಡು ಚಪ್ಪಲಿ , ರಕ್ತದ ಕಲೆ ಕಂಡು ಬಂದಿದ್ದು, ಹಾಲಿನ ಕ್ಯಾನ್ ನಾಪತ್ತೆಯಾಗಿದ್ದು ಸಾಕಷ್ಟು ಅನುಮಾನ ಮೂಡಿಸಿದೆ.
ಬೆಳ್ತಂಗಡಿ ಪೊಲೀಸರು ಸಿಸಿಕ್ಯಾಮರ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.
- Advertisement -