Saturday, June 6, 2026
Homeಕರಾವಳಿಮೋದಿ ಕಾರ್ಯಕ್ರಮಕ್ಕೆ ಸುಮಾರು 2 ಸಾವಿರ ಬಸ್ ಗಳ‌ ನಿಯೋಜನೆ: ಬಸ್ ಗಳಿಲ್ಲದೇ ಗ್ರಾಮೀಣ...

ಮೋದಿ ಕಾರ್ಯಕ್ರಮಕ್ಕೆ ಸುಮಾರು 2 ಸಾವಿರ ಬಸ್ ಗಳ‌ ನಿಯೋಜನೆ: ಬಸ್ ಗಳಿಲ್ಲದೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಜನ ಸಾಮಾನ್ಯರ ಪರದಾಟ

- Advertisement -
- Advertisement -

ಮಂಗಳೂರು; ಇಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಆಗಮಿಸುತ್ತಿದ್ದು, ಈ‌ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಂದ ಜನರನ್ನು ಕರೆ ತರಲು ಸುಮಾರು  2 ಸಾವಿರ ಕೆಎಸ್ ಆರ್ ಟಿಸಿ ಬಸ್ ಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಇದರಿಂದಾಗಿ‌ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಇತರೆ ಕೆಲಸಗಳಿಗೆ ಹೋಗುವ ಜನ ಸಾಮಾನ್ಯರು ಬಸ್ ಗಳು ಇಲ್ಲದೇ ಪರದಾಡುವಂತಾಗಿದೆ.

ಮಂಗಳೂರಿನ ಶಾಲಾ ಕಾಲೇಜುಗಳಿಗೆ ಇಂದು ರಜೆ‌ ನೀಡಲಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಎಂದಿನಂತೆ‌‌ ಇಂದು‌ ಶಾಲಾ‌ ಕಾಲೇಜುಗಳಲ್ಲಿ‌ ತರಗತಿಗಳು ನಡೆಯಲಿವೆ. ಬಸ್ ಗಳು‌ ಇಲ್ಲದೇ ವಿದ್ಯಾರ್ಥಿಗಳು ಶಾಲೆ‌, ಕಾಲೇಜಿಗೆ ಬರೋದು ಹೇಗೆ? ಇದು‌ ಜಿಲ್ಲಾಡಳಿತದ ಯಡವಟ್ಟಿನ‌ ನಿರ್ಧಾರವಲ್ಲವೇ ಎಂದು‌ ಜನ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ‌.

- Advertisement -

Latest News

error: Content is protected !!