- Advertisement -
- Advertisement -
ಬಂಟ್ವಾಳ: ಎರಡು ತಿಂಗಳ ಹಿಂದೆ ವಿವಾಹವಾಗಿದ್ದ ನವ ವಿವಾಹಿತೆ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.ಫರಂಗಿಪೇಟೆ ಅಮ್ಮೆಮ್ಮಾರ್ ನಿವಾಸಿ ಮಹಮ್ಮದ್ ಅವರ ಪುತ್ರಿ ಮುನೀಝಾ(20) ಮೃತ ದುರ್ದೈವಿ.
ಎರಡು ತಿಂಗಳ ಹಿಂದೆ ಮುನೀಝಾ ಅವರನ್ನು ಕಲ್ಲಡ್ಕದ ಇಬ್ರಾಹಿಂ ತೌಸೀರ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ಇಂದು ಬೆಳಗ್ಗೆ ಮನೆಗೆ ನೀರು ತರುವುದಕ್ಕಾಗಿ ಮುನೀಝಾ ಬಾವಿ ಬಳಿ ಹೋಗಿದ್ದಾರೆ. ಎಷ್ಟು ಹೊತ್ತಾದರೂ ಬಾರದೇ ಇರೋದನ್ನು ಗಮನಿಸಿ ಹೋಗಿ ನೋಡಿದಾಗ ಅವರ ಮೃತದೇಹ ಬಾವಿಯಲ್ಲಿ ವತ್ತೆಯಾಗಿದೆ.
- Advertisement -