Thursday, April 25, 2024
Homeಕರಾವಳಿಸವಣಾಲು ಅನುದಾನಿತ ಪ್ರಾಥಮಿಕ ಶಾಲೆಗೆ ಬೆಂಗಳೂರು ಖಾಸಗಿ ಕಂಪನಿಯಿಂದ ನೂತನ ಕೊಠಡಿ, ಪೀಠೋಪಕರಣ ಹಸ್ತಾಂತರ

ಸವಣಾಲು ಅನುದಾನಿತ ಪ್ರಾಥಮಿಕ ಶಾಲೆಗೆ ಬೆಂಗಳೂರು ಖಾಸಗಿ ಕಂಪನಿಯಿಂದ ನೂತನ ಕೊಠಡಿ, ಪೀಠೋಪಕರಣ ಹಸ್ತಾಂತರ

spot_img
- Advertisement -
- Advertisement -

ಬೆಳ್ತಂಗಡಿ: ಸವಣಾಲು ಅನುದಾನಿತ ಪ್ರಾಥಮಿಕ ಶಾಲೆಗೆ ತ್ರಿಪಥ್ ಲಾಜಿಸ್ಟಿಕ್ಸ್ ಬೆಂಗಳೂರು ಇವರು ಕೊಡಮಾಡಿದ ಶಾಲಾ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ , ಪೀಠೋಪಕರಣ ಹಸ್ತಾಂತರ ಮತ್ತು ಹಳೆ ವಿದ್ಯಾರ್ಥಿ ವಿಜ್ಞಾನಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.

ಸಭಾ ಕಾರ್ಯಕ್ರಮದಲ್ಲಿ ಶ್ರೀ ಲಕ್ಷ್ಮೀನಾರಾಯಣ ಎಜ್ಯುಕೇಶನಲ್ ಸೊಸೈಟಿ ಅಧ್ಯಕ್ಷ ಲ.ರಘುರಾಮ ಗಾಂಭೀರ ಅಧ್ಯಕ್ಷತೆಯನ್ನು ವಹಿಸಿದ್ದರು .

ಉದ್ಘಾಟನೆ ಸಮಾರಂಭವನ್ನು ಕಂಪೆನಿಯ ಅಧ್ಯಕ್ಷ ಬದರಿನಾಥ ಜಿ ಗುಬ್ಬಿ ನೆರವೇರಿಸಿದರು . ಮುಖ್ಯ ಅತಿಥಿಗಳಾಗಿ ನೋಟರಿ ನ್ಯಾಯವಾದಿ ಮುರಳಿ ಬಿ , ಸುರತ್ಕಲ್ ಎನ್ ಐ ಟಿ ಕೆ ಪ್ರಾಧ್ಯಾಪಕ ಡಾ . ದೇಂತಾಜೆ ಕೃಷ್ಣ ಭಟ್ ಭಾಗಿಯಾಗಿದ್ದರು . ಸಮಾರಂಭದಲ್ಲಿ ತ್ರಿಪಥ್ ಲಾಜಿಸ್ಟಿಕ್ಸ್ ಇದರ ಕಾರ್ಪೋರೇಟರ್ ಪ್ಲೇನಿಂಗ್ ವಿಭಾಗದ ನಿರ್ದೇಶಕ ಅಬ್ಬಾಸ್ ಖಾನ್ , ಮಾರ್ಕೆಟಿಂಗ್ ವಿಭಾಗದ ನಿರ್ದೇಶಕ ಪ್ರಭಂಜನ್ ಶ್ರೀಧರ್ , ಹಣಕಾಸು ವಿಭಾಗದ ನಿರ್ದೇಶಕರಾದ ಶ್ರೀಕರ ತಂತ್ರಿ ಮತ್ತು ರಮೇಶ್ , ನಿರ್ದೇಶಕರಾದ ರವೀಂದ್ರ ಕುಮಾರ್ , ರಾಮಚಂದ್ರ ಕುಲಾಲ್ , ಮೈಕಲ್ ಅರೋಕ್ಯನಾಥನ್ , ನಿವೃತ್ತ ಶಿಕ್ಷಕ ಏಮಣ್ಣ , ಸಿಆರ್‌ಪಿ ರಾಜೇಶ್ ಮತ್ತು ಕುಶಾಲಪ್ಪ ಗೌಡ , ಎಸ್.ಜಿ , ಶಾಲಾ ಮುಖ್ಯ ಶಿಕ್ಷಕ ಮತ್ತಿತರರು ಉಪಸ್ಥಿತರಿದ್ದರು.

ಗ್ರಾ.ಪಂ ಸದಸ್ಯರು ಪ್ರಭಾಕರ ಆಚಾರ್ಯ , ಸುಮಲತಾ ಬಾರಡ್ಕ , ಚಂದ್ರಶೇಖರ್ ಮತ್ತು ಲೋಕನಾಥ ಶೆಟ್ಟಿ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ರೈ , ಎಸ್‌ಡಿಎಂಸಿ ಅಧ್ಯಕ್ಷ ಕೇಶವ ನಾಯ್ಕ ಶಾಲಾ ವಿದ್ಯಾರ್ಥಿ ನಾಯಕಿ ರಕ್ಷಿತಾ ಹಾಜರಿದ್ದರು.ಗಣೇಶ್ ಭಂಡಾರಿ , ವಿವೇಕ್ ಶೆಟ್ಟಿ ಮತ್ತು ಮಮತಾ ಎನ್ ಸನ್ಮಾನಿತರನ್ನು ಪರಿಚಯಿಸಿದರು . ಸಹ ಶಿಕ್ಷಕಿಯರಾದ ಮಹಾಲಕ್ಷ್ಮೀ , ನಿಶ್ಮಿತಾ , ಶುಭಾ , ಸೌಮ್ಯಾ ಇವರು ಸಹಕರ ನೀಡಿದರು.

ಸವಣಾಲು ಶಾಲೆಯಲ್ಲಿ ಕಲಿತ ಸ್ಥಳೀಯ ನಿವಾಸಿ ಜಮೀಲಾ ಅವರ ಪತಿ ಅಬ್ಬಾಸ್ ಖಾನ್ ಅವರು ತ್ರಿಪಥ ಲಾಜಿಸ್ಟಿಕ್ಸ್ ಬೆಂಗಳೂರು ಸಂಸ್ಥೆಯ ಕಾರ್ಪೋರೆಟ್ ಪ್ಲಾನಿಂಗ್ ನಿರ್ದೇಶಕರಾಗಿದ್ದು , ಅವರ ಮುಖೇನ ಈ ಕೊಡುಗೆ ಇಲ್ಲಿಗೆ ಸಮರ್ಪಣೆ ಆಗಿದೆ ಎಂದು ಮುಖ್ಯೋಪಾಧ್ಯಾಯ ಮಂಜುನಾಥ ಪ್ರಸ್ತಾವನೆಗೈದರು. ಇತ್ತೀಚಿಗೆ ಅಗಲಿದ ಊರ ಹಿರಿಯ ಕೇಶವ ಭಟ್ ಮಲ್ಲರೋಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು . ಶಾಲೆಗೆ ದೇಣಿಗೆ ನೀಡಿದವರನ್ನು ಗುರುತಿಸಲಾಯಿತು .

- Advertisement -
spot_img

Latest News

error: Content is protected !!