- Advertisement -
- Advertisement -
ಕಾರ್ಕಳದ ಮಿಯ್ಯಾರುವಿನಲ್ಲಿ ಹಟ್ಟಿಯಲ್ಲಿ ಕಟ್ಟಿದ್ದ ದನಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ .
ಈ ಕುರಿತು ಯಶೋಧ ಆಚಾರ್ಯ ಅವರು ಪೊಲೀಸರಿಗೆ ದೂರು ನೀಡಿದ್ದು , ಅದರಂತೆ ಯಶೋಧ ಆಚಾರ್ಯ ಅವರು ದನಗಳನ್ನು ಹಟ್ಟಿಯಲ್ಲಿ ಕಟ್ಟಿದ್ದರು . ಆದರೆ ಮತ್ತೆ ನೋಡಿದಾಗ ಹಟ್ಟಿಯಲ್ಲಿ ದನ ಇಲ್ಲದೇ ಇರುವುದು ಗಮನಕ್ಕೆ ಬಂದಿದೆ.
ಅದೇ ರೀತಿ ದೂರುದಾರರ ಪಕ್ಕದ ಮನೆಯ ಸುಧಾಕರ ಶೆಟ್ಟಿಯವರ ಹಟ್ಟಿಯಲ್ಲಿ ಕಟ್ಟಿದ್ದ ದನ ಕೂಡಾ ಕಳವಾಗಿದ್ದು , ಹಟ್ಟಿಯಲ್ಲಿ ಕಟ್ಟಿದ್ದ ದನವನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
- Advertisement -