ಉಡುಪಿ ರೈಲ್ವೆ ನಿಲ್ದಾಣದಲ್ಲಿ ಕುರ್ಲಾ – ಎರ್ನಾಕುಲಂ ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್ ಕಳವಾಗಿರುವ ಘಟನೆ ನಡೆದಿದೆ .
ಈ ಕುರಿತು ಪೊದಿಯಮ್ಮ ಡೆನಿಲ್ ಅವರು ಕೇರಳದ ಕಣ್ಣೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಘಟನೆ ಉಡುಪಿ ರೈಲ್ವೆ ನಿಲ್ದಾಣದಲ್ಲಿ ನಡೆದಿರುವ ಕಾರಣ ಈ ಪ್ರಕರಣ ಮಣಿಪಾಲ ಠಾಣೆಗೆ ಸೇರಿದಾಗಿತ್ತು ಹಾಗಾಗಿ ಇಲ್ಲಿಗೆ ವರ್ಗಾವಣೆಗೊಂಡಿತ್ತು.
ಅದರಂತೆ ಪೊದಿಯಮ್ಮ ಡೆನಿಲ್ ಅವರು ತನ್ನ ಗಂಡ ಹಾಗೂ ಮಗನೊಂದಿಗೆ ಕುರ್ಲಾ ~ ಎರ್ನಾಕುಲಂ ನೇತ್ರಾವತಿ ಎಕ್ಸ್ ಪ್ರೆಸ್ ಟ್ರೈನ್ ನಲ್ಲಿ ಕಣ್ಣೂರಿನಿಂದ ಕಯಾಕುಲಂಗೆ ಪ್ರಯಾಣಿಸುತ್ತಿದ್ದರು . ಈ ರೈಲು ಉಡುಪಿ ರೈಲ್ವೇ ನಿಲ್ದಾಣ ತಲುಪಿದಾಗ 30 ವರ್ಷ ಪ್ರಾಯದ ವ್ಯಕ್ತಿ ದೂರುದಾರರ ವ್ಯಾನಿಟಿ ಬ್ಯಾಗ್ ಕದ್ದು ಪರಾರಿಯಾಗಿದ್ದಾನೆ .
ಕಳವಾದ ಬ್ಯಾಗ್ ನಲ್ಲಿ ಚಿನ್ನಾಭರಣಗಳು , ಪ್ಲಾಟಿನಂ ಆಭರಣ , 2 ಮೊಬೈಲ್ ಫೋನ್ , 15,000 ರೂ . ನಗದು ಸಹಿತ ಅಗತ್ಯ ದಾಖಲೆಗಳು ಇರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ . ಕಳವಾದ ಸೊತ್ತುಗಳ ಒಟ್ಟು ಮೌಲ್ಯ 7 ಲಕ್ಷ ರೂ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .