- Advertisement -
- Advertisement -
ಮಡಿಕೇರಿ: ಆಕಸ್ಮಿಕವಾಗಿ ಕಾಲುಜಾರಿ ಬಿದ್ದು, ಎನ್ ಸಿ ಸಿ ಅಧಿಕಾರಿ ಸಾವನ್ನಪ್ಪಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.ವಿರಾಜಪೇಟೆಯ ಬಲ್ಯಂಡ ಡಾ. ಎಸ್.ಎನ್ ಬೀನಾ (52) ಮೃತ ದುರ್ದೈವಿ.
ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಎನ್ ಸಿ ಸಿ ಅಧಿಕಾರಿಯಾಗಿದ್ದ ಡಾ. ಎಸ್.ಎನ್ ಬೀನಾ, ಈ ಹಿಂದೆ ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ವಿರಾಜಪೇಟೆಯ ಕಡಂಗದ ಮರೂರು ಗ್ರಾಮದ ನಿವಾಸಿ ಡಾ.ಎಸ್.ಎನ್.ಬೀನಾ.ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯವಾಗಿದೆ.
ಮೈಸೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೀನಾ ಸಾವನ್ನಪ್ಪಿದ್ದಾರೆ.
- Advertisement -