Monday, May 6, 2024
Homeತಾಜಾ ಸುದ್ದಿಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ತಣ್ಣಗಾಗದ ಆಕ್ರೋಶ: ಟಿಕೆಟ್‌ ನೀಡದಂತೆ ಮೋದಿ, ಅಮಿತ್ ಶಾ, ಶೋಭಾ...

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ತಣ್ಣಗಾಗದ ಆಕ್ರೋಶ: ಟಿಕೆಟ್‌ ನೀಡದಂತೆ ಮೋದಿ, ಅಮಿತ್ ಶಾ, ಶೋಭಾ ಕರಂದ್ಲಾಜೆಗೆ ಕಾರ್ಯಕರ್ತರ ಪತ್ರ

spot_img
- Advertisement -
- Advertisement -

ಚಿಕ್ಕಮಗಳೂರು: ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ನಡೆಯುತ್ತಿರುವ ಬಂಡಾಯ ಇನ್ನೂ ತಣ್ಣಗಾಗಿಲ್ಲ. ಇದೀಗ ಕುಮಾರಸ್ವಾಮಿಗೆ ಟಿಕೆಟ್ ಬೇಡವೇ ಬೇಡ ಅಂತ ಮೋದಿ, ಅಮಿತ್ ಶಾ, ಸಂತೋಷ್, ನಡ್ಡಾ, ಶೋಭಾ ಕರಂದ್ಲಾಜೆಗೆ ಪತ್ರ ಬರೆಯಲು ಕಾರ್ಯಕರ್ತರು ನಿರ್ಧರಿಸಿದ್ದಾರೆ.

10 ಪಾಯಿಂಟ್ ಗಳ ಮಾಹಿತಿಯುಳ್ಳ ಪತ್ರವನ್ನ ಕಾರ್ಯಕರ್ತರು ಮೇಲ್ ಮಾಡಿದ್ದಾರೆ. ಮೂಡಿಗೆರೆ ತಾಲೂಕಿನ ಪ್ರತಿ ಹೋಬಳಿಯಿಂದಲೂ ಪತ್ರ  ಬರೆಯಲಾಗಿದೆ. ಬಿಜೆಪಿ ಮುಖಂಡರು, ಕಾರ್ಯಕರ್ತರು ಸಂತೋಷ್, ಶೋಭಾ ಕರಂದ್ಲಾಜೆಗೆ ಪತ್ರ ಕಳಿಸಿದ್ದಾರೆ.  ಪ್ರಧಾನಿ ಮೋದಿ ಕಚೇರಿಗೂ ಪತ್ರ ತಲುಪಿಸಿದ್ದಾರೆ.

ಪಕ್ಷ ವಿರೋಧಿ, ಕಾರ್ಯಕರ್ತರ ಕಡೆಗಣನೆ, ವಿಧಾನಸೌಧದ ಮುಂದೆ ಪಕ್ಷ ಮರ್ಯಾದೆ ಕಳೆದದ್ದು, ನೋವು ಹೇಳಿಕೊಂಡವರ ವಿರುದ್ಧ ತಾನೇ ಬಟ್ಟೆ ಹರಿದುಕೊಂಡು ಹೈಡ್ರಾಮಾ,  ಆಪ್ತರಿಗೆ ಮಾತ್ರ ಹೆಚ್ಚೆಚ್ಚು ಅನುದಾನ ನೀಡಿರೋ ಆರೋಪ ಸೇರಿದಂತೆ ಕುಮಾರಸ್ವಾಮಿ ನಡೆಯ ಪಾಯಿಂಟ್ಸ್ ಗಳ ಪಟ್ಟಿಗಳನ್ನೇ ರವಾನಿಸಲಾಗಿದೆ.

- Advertisement -
spot_img

Latest News

error: Content is protected !!