Wednesday, May 8, 2024
Homeತಾಜಾ ಸುದ್ದಿಮಾಧ್ಯಮ ಪ್ರತಿನಿಧಿಗಳ ಮೇಲೆ ದರ್ಪ ಮೆರೆದ ಶಾಸಕ ಭೈರತಿ ಸುರೇಶ್

ಮಾಧ್ಯಮ ಪ್ರತಿನಿಧಿಗಳ ಮೇಲೆ ದರ್ಪ ಮೆರೆದ ಶಾಸಕ ಭೈರತಿ ಸುರೇಶ್

spot_img
- Advertisement -
- Advertisement -

ನವದೆಹಲಿ: ಸಿದ್ದರಾಮಯ್ಯ ಮಾಧ್ಯಮ ಜತೆ ಮಾತನಾಡುತ್ತಿದ್ದ ವೇಳೆ ಮಾಧ್ಯಮದವರ ಮೇಲೆ ಶಾಸಕ ಭೈರತಿ ಸುರೇಶ್ ದರ್ಪ ಮೆರೆದ ಘಟನೆ ನವದೆಹಲಿಯಲ್ಲಿ ನಡೆದಿದೆ.

ಸಿದ್ದರಾಮಯ್ಯ ಅವರು ಮಾಧ್ಯಮರ ಜೊತೆ ಮಾತನಾಡುತ್ತಿದ್ದಾಗ ಭೈರತಿ ಸುರೇಶ್ ಪತ್ರಕರ್ತರನ್ನೇ ತಳ್ಳಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.ಅಲ್ಲದೇ ಏಕವಚನದಿಂದ ನಿಂದಿಸಿದ್ದಾರೆ. ಕೂಡಲೇ ಪರಿಸ್ಥಿತಿ ನೋಡಿ ಸುರೇಶ್ ಗೆ ಸುಮ್ನಿರಯ್ಯ ಎಂದು ಹೇಳಿದ್ದಾರೆ ಸಿದ್ದರಾಮಯ್ಯ. ಸುರೇಶ್ ನಡೆ ಬಗ್ಗೆ ಇತರ ಮುಖಂಡರೂ ಅಸಮಾಧಾನ ಹೊರಹಾಕಿದ್ದಾರೆ.

ಇನ್ನು ಪತ್ರಕರ್ತರು ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದಾಗ ಏನೋ ಲೂಸಾ ಎಂದು ಮೊಬೈಲ್ ಕಿತ್ತುಕೊಳ್ಳಲು ಸುರೇಶ್ ಮುಂದಾಗಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!