- Advertisement -
- Advertisement -
ನವದೆಹಲಿ : ದೇಶದಲ್ಲಿ ‘ಸಾಮೂಹಿಕ ಹಲ್ಲೆ ನಡೆಸುವವರು ಹಿಂದುತ್ವದ ವಿರೋಧಿಗಳು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಆರ್ಎಸ್ಎಸ್ ಘಟಕವಾದ ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ಮುಸ್ಲಿಮರು ದೇಶದಲ್ಲಿ ಇರಬಾರದು ಎನ್ನುವ ಹಿಂದೂ ವ್ಯಕ್ತಿ, ನಿಜವಾಗಿಯೂ ಹಿಂದೂವೇ ಅಲ್ಲ. ಧರ್ಮಗಳ ಹೊರತಾಗಿ ಎಲ್ಲ ಭಾರತೀಯರ ಡಿಎನ್ಎ ಒಂದೇ ಆಗಿದೆ ಎನ್ನುವುದನ್ನು ಮರೆಯಬಾರದು. ಮುಸ್ಲಿಮರು ಸೇರಿದಂತೆ ಯಾರ ಮೇಲೂ ಸಾಮೂಹಿಕ ಹಲ್ಲೆಗೆ ಮುಂದಾಗುವವರು ಹಿಂದುತ್ವ ವಿರೋಧಿಗಳು ಎಂದು ಭಾಗವತ್ ಹೇಳಿದರು.
- Advertisement -