Thursday, June 4, 2026
Homeಕರಾವಳಿಉಡುಪಿಬೊಮ್ಮಾಯಿ ಗಂಡಸುತನವನ್ನು ಅಭಿವೃದ್ಧಿ ವಿಚಾರದಲ್ಲಿ ತೋರಿಸುತ್ತಿದ್ದಾರೆ: ಹೆಚ್‌ಡಿಕೆ ಹೇಳಿಕೆಗೆ ಶಾಸಕ ರಘುಪತಿ ಭಟ್ ತಿರುಗೇಟು

ಬೊಮ್ಮಾಯಿ ಗಂಡಸುತನವನ್ನು ಅಭಿವೃದ್ಧಿ ವಿಚಾರದಲ್ಲಿ ತೋರಿಸುತ್ತಿದ್ದಾರೆ: ಹೆಚ್‌ಡಿಕೆ ಹೇಳಿಕೆಗೆ ಶಾಸಕ ರಘುಪತಿ ಭಟ್ ತಿರುಗೇಟು

- Advertisement -
- Advertisement -

ಉಡುಪಿ: ಸಿಎಂ  ಬೊಮ್ಮಾಯಿಗೆ ಗಂಡಸ್ತನ ಇಲ್ಲ ಎಂಬ  ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಶಾಸಕ ರಘುಪತಿ ಭಟ್ ತಿರುಗೇಟು ನೀಡಿದ್ದಾರೆ. ಬೊಮ್ಮಾಯಿ ಅವರಿಗೆ ಗಂಡಸ್ತನ ಇರುವುದಕ್ಕೇ ಉತ್ತಮ ರೀತಿಯಲ್ಲಿ ಆಡಳಿತ ಮಾಡುತ್ತಿದ್ದಾರೆ‌. ಬೊಮ್ಮಾಯಿ ತನ್ನ ಗಂಡಸುತನವನ್ನು ಆಡಳಿತದಲ್ಲಿ ತೋರಿಸುತ್ತಿದ್ದಾರೆ.

ಬೊಮ್ಮಾಯಿ ಗಂಡಸುತನವನ್ನು ಅಭಿವೃದ್ಧಿ ವಿಚಾರದಲ್ಲಿ ತೋರಿಸುತ್ತಿದ್ದಾರೆ. ಸಿಎಂ ಬೊಮ್ಮಾಯಿ ಯಾವುದೇ ಒಂದು ಧರ್ಮದ ಪರವಾಗಿ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಮುಖ್ಯಮಂತ್ರಿಯಾಗಿ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದಾರೆ. ಗಂಡಸ್ತನ ಇದ್ದದ್ದಕ್ಕೆ ಬೊಮ್ಮಾಯಿ ರಾಜ್ಯದಲ್ಲಿ ಸಮರ್ಥವಾಗಿ ಅಧಿಕಾರ ನಡೆಸುತ್ತಿದ್ದಾರೆ ಎಂದು ಎಚ್ ಡಿಕೆಗೆ ತಿರುಗೇಟು ನೀಡಿದ್ದಾರೆ.

- Advertisement -

Latest News

error: Content is protected !!