Thursday, May 16, 2024
Homeತಾಜಾ ಸುದ್ದಿಹೆಂಡ್ತಿ ಕಾಟಕ್ಕೆ ಬೇಸತ್ತು 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪತಿರಾಯ: ಕೊನೆಗೆ ಆಕೆಯ ಕೈಗೇ ಸಿಕ್ಕಿ ಬಿದ್ದದ್ದು...

ಹೆಂಡ್ತಿ ಕಾಟಕ್ಕೆ ಬೇಸತ್ತು 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪತಿರಾಯ: ಕೊನೆಗೆ ಆಕೆಯ ಕೈಗೇ ಸಿಕ್ಕಿ ಬಿದ್ದದ್ದು ಹೇಗೆ?

spot_img
- Advertisement -
- Advertisement -

ಬೆಂಗಳೂರು: ಹೆಂಡ್ತಿ ಕಾಟಕ್ಕೆ ಬೇಸತ್ತು 7 ವರ್ಷಗಳ ಹಿಂದೆ ಬೆಂಗಳೂರಿನಿಂದ ಎಸ್ಕೇಪ್ ಆಗಿದ್ದ ಪತಿ ಮಹಾಶಯನೊಬ್ಬ ಕೊನೆಗೆ ಪತ್ನಿಯ ಕೈಗೆ ಸಿಕ್ಕಿಹಾಕಿಕೊಂಡ ರೋಚಕ ಘಟನೆಯೊಂದು ನಡೆದಿದೆ.

7 ವರ್ಷದ ಹಿಂದೆ ದಾವಣಗೆರೆ ಜಿಲ್ಲೆಯ ಕೋಟೆಪ್ಪ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ನಿಧಾನಕ್ಕೆ ಪತ್ನಿಯ ಕಾಟ ಹೆಚ್ಚಾಗಿದ್ದರಿಂದ ಆಕೆಯ ಸಹವಾಸವೇ ಬೇಡ ಅಂತಾ 2015ರಲ್ಲಿ ಹೆಂಡ್ತಿಯನ್ನು ಬಿಟ್ಟು ಕೋಟೆಪ್ಪ ಎಸ್ಕೇಪ್ ಆಗಿದ್ದರು. ಎಲ್ಲಿ ಹುಡುಕಿದರೂ ಕಳೆದ 7 ವರ್ಷಗಳಿಂದ ಪತಿ ಪತ್ತೆಯಾಗಿರಲಿಲ್ಲ.

ಇತ್ತ ನಾಪತ್ತೆಯಾಗಿದ್ದ ಪತಿ ಒಡಿಶಾಗೆ ಹೋಗಿ ಅಲ್ಲಿ ಹೊಸ ಕೆಲಸ ಹುಡುಕಿಕೊಂಡು ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಕೋಟೆಪ್ಪತಮ್ಮ ತಂದೆಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ದಾವಣಗೆರೆಯ ಹರಿಹರಕ್ಕೆ ತನ್ನ ಹುಟ್ಟೂರಿಗೆ ಬಂದಿದ್ದರು. ಈ ವೇಳೆ ಖಾಸಗಿ ಬ್ಯಾಂಕ್​​ನಲ್ಲಿದ್ದ ತಮ್ಮ ಖಾತೆಯಲ್ಲಿ 10,000 FD ಮಾಡಿದ್ದಾರೆ. ಅದು ಹಳೆ ಖಾತೆಯಾಗಿದ್ದರಿಂದ ಆ ಖಾತೆಯ ನಾಮಿನಿಯಾಗಿದ್ದ ಪತ್ನಿಗೆ ಹಣ ಜಮಾ ಆಗುತ್ತಿದ್ದಂತೆ ಮೆಸೇಜ್ ಹೋಗಿದೆ.

ಕೂಡಲೇ ಆಕೆ ಬೆಂಗಳೂರಿನ ಆಡುಗೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕೋಟೆಪ್ಪನನ್ನು ಹುಡುಕಿ ಮಡದಿ ಮನೆ ಸೇರಿಸಿದ್ದಾರೆ. ಒಟ್ಟಿನಲ್ಲಿ ಏನೋ ಮಾಡಲು ಹೋಗಿ ಇನ್ನೇನೋ ಆದಂತಾಗಿದೆ ಸದ್ಯ ಕೋಟೆಪ್ಪನ ಕಥೆ.

- Advertisement -
spot_img

Latest News

error: Content is protected !!