Sunday, June 7, 2026
Homeಆರಾಧನಾಶಿರಸಿ: ಉತ್ಸವದಲ್ಲಿ ಕೆಂಡ ಹಾಯ್ದ ಸಚಿವ ಶಿವರಾಮ ಹೆಬ್ಬಾರ

ಶಿರಸಿ: ಉತ್ಸವದಲ್ಲಿ ಕೆಂಡ ಹಾಯ್ದ ಸಚಿವ ಶಿವರಾಮ ಹೆಬ್ಬಾರ

- Advertisement -
- Advertisement -

ಶಿರಸಿ: ತಾಲ್ಲೂಕಿನ ನರೂರ ಗ್ರಾಮದ ವೀರಭದ್ರೇಶ್ವರ ಮತ್ತು ಚೌಡೇಶ್ವರಿ ದೇವಸ್ಥಾನದಲ್ಲಿ ಮಂಗಳವಾರ ನಡೆದ ಗುಗ್ಗಳ ಉತ್ಸವದ ವೇಳೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಕೆಂಡ ಹಾಯ್ದರು.


ದೇವಸ್ಥಾನದಲ್ಲಿ ಪ್ರತಿ ವರ್ಷ ನಡೆಯುವ ಉತ್ಸವದ ವೇಳೆ ಕೆಂಡ ಹಾಯುವ ಪದ್ಧತಿ ನಡೆಸಿಕೊಂಡು ಬರಲಾಗುತ್ತಿದೆ. ಇಷ್ಟಾರ್ಥ ಈಡೇರಿಕೆಗೆ ಪ್ರಾರ್ಥಿಸಿ ಭಕ್ತರು ಈ ಪದ್ಧತಿ ಅನುಸರಿಸುತ್ತಿದ್ದಾರೆ.

ದೇವರ ದರ್ಶನಕ್ಕೆ ತೆರಳಿದ್ದ ಸಚಿವ ಹೆಬ್ಬಾರ ಭಕ್ತರ ಜತೆಗೆ ತಾವೂ ಕೆಂಡ ಹಾಯ್ದರು. ಈ ವೇಳೆ ಬನವಾಸಿ ಭಾಗದ ಬಿಜೆಪಿ ಮುಖಂಡರು, ಹೆಬ್ಬಾರ ಅಭಿಮಾನಿಗಳು ಇದ್ದರು.

- Advertisement -

Latest News

error: Content is protected !!