Saturday, June 6, 2026
Homeಕರಾವಳಿಉಡುಪಿಕೊರೋನಾ ಭೀತಿಯ ಕಾರಣದಿಂದಾಗಿ ಈ ಬಾರಿಯ ಮರವಂತೆ ಜಾತ್ರೆ ರದ್ದು

ಕೊರೋನಾ ಭೀತಿಯ ಕಾರಣದಿಂದಾಗಿ ಈ ಬಾರಿಯ ಮರವಂತೆ ಜಾತ್ರೆ ರದ್ದು

- Advertisement -
- Advertisement -

ಕುಂದಾಪುರ: ನಾಡಿನೆಲ್ಲೆಡೆ ವೇಗವಾಗಿ ಹರಡುತ್ತಿರುವ ಕೊರೋನಾ ವೈರಸ್ ಭೀತಿಯನ್ನು ಗಮನಿಸಿ ಮರವಂತೆಯ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಜು.20 ರಂದು ನಡೆಯಬೇಕಿದ್ದ ಈ ವರ್ಷದ ಆಷಾಢ ಅಮಾವಾಸ್ಯೆ ಜಾತ್ರೆಯನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಧಾರ್ಮಿಕ ಕಾರ್ಯಕ್ರಮಗಳು, ಶುಭ ಸಮಾರಂಭಗಳಲ್ಲಿ ಹೆಚ್ಚು ಜನರನ್ನು ಸೇರಿಸಬಾರದು ಎನ್ನುವ ಜಿಲ್ಲಾಧಿಕಾರಿಗಳ ಆದೇಶವಿದ್ದು, ಹಾಗಾಗಿ ಜಾತ್ರೆಗೆ ಬೇರೆ ಬೇರೆ ಕಡೆಯಿಂದ ಸಾವಿರಾರು ಮಂದಿ ಬರುವ ನಿರೀಕ್ಷೆ ಇರುವುದರಿಂದ ಈ ಬಾರಿಯ ಮರವಂತೆ ಜಾತ್ರೆಯನ್ನು ರದ್ದುಗೊಳಿಸಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ತೀರ್ಮಾನಿಸಿದೆ.

ಜಾತ್ರೆಯ ಪ್ರಯುಕ್ತ ಸಮಿತಿ ಪದಾಧಿಕಾರಿಗಳು, ಅರ್ಚಕ ವೃಂದದಿಂದ ಸರಳವಾಗಿ ಧಾರ್ಮಿಕ ವಿಧಿ- ವಿಧಾನಗಳು ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಹೆಬ್ಟಾರ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!