- Advertisement -
- Advertisement -
ದಕ್ಷಿಣಕನ್ನಡ : ಜಿಲ್ಲೆಯಲ್ಲಿ ಕೊರೊನಾ ಅನ್ನೋ ಮಹಾಮಾರಿಯ ಅಬ್ಬರ ಜೋರಾಗ್ತಿದೆ. ಯಾರನ್ನೂ ಬಿಡದೆ ಎಲ್ಲರನ್ನೂ ಟಾರ್ಗೆಟ್ ಮಾಡಿದಂತೆ ಕಾಣ್ತಿದೆ. ಹೀಗಿರುವಾಗಲೇ ಇದೀಗ ಮಂಗಳೂರಿನ ಬಿಜೆಪಿ ಶಾಸಕ ಭರತ್ ಶೆಟ್ಟಿ ರಿಗೆ ಕೊರೊನಾ ಪಾಸಿಟಿವ್ ಆಗಿದೆ.
ಶಾಸಕರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ. ಸ್ವಯಂ ಪ್ರೇರಿತವಾಗಿ ಕೊರೊನಾ ತಪಾಸಣೆ ನಡೆಸಿದ ಸಂದರ್ಭ ಸೋಂಕು ಪತ್ತೆಯಾಗಿದೆ.
ಆದರೆ ಅವರಿಗೆ ಸೋಂಕು ಹೇಗೆ ಬಂತು ಅನ್ನೋ ಬಗ್ಗೆ ಇನ್ನೂ ಮಾಹಿತಿ ತಿಳಿದು ಬಂದಿಲ್ಲ. ಈ ಹಿನ್ನೆಲೆ ಶಾಸಕರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ.
ಇನ್ನು ಇವತ್ತು ಬೆಳಗ್ಗೆಯಷ್ಟೇ 7 ದಿನದ ಹಸುಗೂಸಿಗೆ ಕೊರೊನಾ ಇರೋದು ದೃಢಪಟ್ಟಿತ್ತು.
- Advertisement -