- Advertisement -
- Advertisement -
ಮಂಡ್ಯ : ಅದೃಷ್ಟ ಅನ್ನೋದು ಯಾವಾಗ ಯಾವ ರೂಪದಲ್ಲಿ ಬರುತ್ತೆ ಅಂತಾ ಹೇಳೋದಕ್ಕೆ ಸಾಧ್ಯಾನೇ ಇಲ್ಲ. ಮಂಡ್ಯದ ಯುವಕನೊಬ್ಬನಿಗೆ ಅದೃಷ್ಟ ಅನ್ನೋದು ಫೇಸ್ ಬುಕ್ ನಿಂದಾಗಿ ಒಲಿದು ಬಂದಿದೆ.
ಹೌದು.. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಉದ್ಯಮಿಯ ಪುತ್ರ ಸೋಹನ್ ಎಂಬಾತನಿಗೆ ಫೇಸ್ ಬುಕ್ ಮೂಲಕ ಕೇರಳದ ಯುವಕನೊಬ್ಬ ಸ್ನೇಹಿತನಾಗಿದ್ದಾನೆ. ಆತನನ್ನು ಭೇಟಿಯಾಗೋದಕ್ಕೆ ಅಂತಾ ಸೋಹನ್ ಕೇರಳಕ್ಕೆ ಹೋಗಿದ್ದಾನೆ. ಈ ವೇಳೆ ಅಲ್ಲಿ 100 ರೂ. ಕೊಟ್ಟು ಭಾಗ್ಯ ಮಿತ್ರ ಲಾಟರಿ ಟಿಕೆಟ್ ಖರೀದಿಸಿದ್ದಾನೆ.
ಸೋಹನ್ ಖರೀದಿಸಿದ ಲಾಟರಿಗೆ ಬಹುಮಾನ ಸಿಕ್ಕಿದ್ದು, ಬಂಪರ್ ಲಾಟರಿಯಲ್ಲಿ 1 ಕೋಟಿ ರೂಪಾಯಿ ಗೆದ್ದಿದ್ದಾನೆ. ಆ ಮೂಲಕ ಬೆಳಗಾಗುವುದರೊಳಗೆ ಕೋಯಾಧಿಪತಿಯಾಗಿದ್ದಾನೆ.
- Advertisement -