- Advertisement -
- Advertisement -
ಉಡುಪಿ: ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಉಡುಪಿಗೆ ಬಂದಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡಲಾಗಿದೆ.
ಉಡುಪಿಯ ಸಮಾಜಸೇವಕರ ಸಮಯ ಪ್ರಜ್ಞೆಯಿಂದ ವ್ಯಕ್ತಿ ರಕ್ಷಣೆ ಮಾಡಲ್ಪಟ್ಟಿದ್ದು, ಮಂಗಳೂರು ಮೂಲದ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳಲು ಉಡುಪಿಯಲ್ಲಿ ಖಾಸಗಿ ವಸತಿಗೃಹ ಹುಡುಕಾಟ ನಡೆಸುತ್ತಿದ್ದ ವಿಷಯ ತಿಳಿದ ಉಡುಪಿಯ ಸಮಾಜ ಸೇವಕರಿಂದ ರಕ್ಷಣೆ ನಡೆದಿದೆ.
ಆತ್ಮಹತ್ಯೆಗೆ ಮುಂದಾಗಿದ್ದ ವ್ಯಕ್ತಿಯ ಮನವೊಲಿಸಿ ಸಂಬಂಧಿಕರಿಗೆ ಒಪ್ಪಿಸಲಾಗಿದೆ.
ರಕ್ಷಣೆ ಮಾಡಲ್ಪಟ್ಟ ವ್ಯಕ್ತಿ ಹೋಟೆಲ್ ನಲ್ಲಿ ಬಾಣಸಿಗರಾಗಿದ್ದರೆಂದು ಮಾಹಿತಿ ತಿಳಿದುಬಂದಿದ್ದು, ಸಮಾಜ ಸೇವಕರಾದ ಕೃಷ್ಣಮೂರ್ತಿ ಆಚಾರ್ಯ, ನಿತ್ಯಾನಂದ ಒಳಕಾಡು, ದೀಪಕ್, ಹರೀಶ್ ಅಮೀನ್ ರಿಂದ ರಕ್ಷಣಾ ಕಾರ್ಯ ನಡೆದಿದೆ.
- Advertisement -