Saturday, May 18, 2024
Homeಉತ್ತರ ಕನ್ನಡಗೋಕರ್ಣದ ಕೋಟಿ ತೀರ್ಥ ಪುಷ್ಕರಣಿಯಲ್ಲಿ ಮುಳುಗಿ ವ್ಯಕ್ತಿ ಸಾವು

ಗೋಕರ್ಣದ ಕೋಟಿ ತೀರ್ಥ ಪುಷ್ಕರಣಿಯಲ್ಲಿ ಮುಳುಗಿ ವ್ಯಕ್ತಿ ಸಾವು

spot_img
- Advertisement -
- Advertisement -

ಗೋಕರ್ಣ: ಗೋಕರ್ಣದ ಕೋಟಿ ತೀರ್ಥ ಪುಷ್ಕರಣಿಯಲ್ಲಿ ಮುಳುಗಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ.

ಗೋಕರ್ಣದ ನಿವಾಸಿಯಾದ ಸಂತೋಷ್ ರೆಬೆಲ್ಲೋ (45) ಸಾವಿಗೀಡಾದ ವ್ಯಕ್ತಿಯಾಗಿದ್ದು ಕೋಟಿ ತೀರ್ಥ ಪುಷ್ಕರಣಿಯಲ್ಲಿ ಈಜಲೆಂದು ಹಾರಿದ್ದ ಎನ್ನಲಾಗಿದೆ.

ಈಜಲು ತಿಳಿದಿದ್ದರೂ ಪುಷ್ಕರಣಿಯಲ್ಲಿ ಮುಳುಗಿ ಸಂತೋಷ್ ಸಾವನ್ನಪ್ಪಿದ್ದು, ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳೀಯರ ಸಹಕಾರದಿಂದ ಮೃತದೇಹವನ್ನು ಪೊಲೀಸರು ಹೊರಕ್ಕೆ ತೆಗೆದಿದ್ದಾರೆ.

- Advertisement -
spot_img

Latest News

error: Content is protected !!