- Advertisement -
- Advertisement -
ಮಡಿಕೇರಿ: ಮಡಿಕೇರಿಯ ಪೊನ್ನಂಪೇಟೆ ತಾಲ್ಲೂಕಿನ ಕೋಣನಕಟ್ಟೆ- ಮರಪಾಲ ತಿತಿಮತಿ ರಸ್ತೆಯಲ್ಲಿ ವ್ಯಕ್ತಿಯೋರ್ವ ಬೈಕ್ ನ ಮೂಲಕ ತೆರಳುವ ಸಂದರ್ಭದಲ್ಲಿ ಆತನ ಮೇಲೆ ಕಾಡಾನೆ ದಾಳಿ ನಡೆಸಿ ವ್ಯಕ್ತಿ ಮೃತನಾದ ದುರ್ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಇಂದು ಬೆಳಿಗ್ಗೆ ಬೈಕ್ ನಲ್ಲಿ ತೆರಳುತ್ತಿದ್ದ ಮೂವರ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ್ದು ಈ ದಾಳಿಗೆ ತುತ್ತಾದ ಮಾರಿಯಮ್ಮ ಕಾಲೋನಿಯ ಚಾಮಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯು ಬೆಳಗ್ಗೆ 07 ಗಂಟೆಗೆ ನಡೆದಿದ್ದು, ನಿನ್ನೆಯಷ್ಟೇ ಕಾಡಾನೆ ಶ್ರೀಮಂಗಲ ಸಮೀಪದ ಬೀರುಗದಲ್ಲಿ ಹಾಲಪ್ಪ ಎಂಬುವವರ ಮೇಲೆ ದಾಳಿ ನಡೆಸಿ ಅವರು ತೀವ್ರವಾಗಿ ಗಾಯಗೊಳ್ಳುವಂತೆ ಮಾಡಿತ್ತು ಎನ್ನಲಾಗಿದೆ..
- Advertisement -