Wednesday, June 3, 2026
Homeಕರಾವಳಿಪುತ್ತೂರು ಅಬಕಾರಿ ಪೊಲೀಸರ ಕಾರ್ಯಾಚರಣೆ : ಸವಣೂರಿನಲ್ಲಿ ಗೇರುಹಣ್ಣಿನ ಸಾರಾಯಿ ಮಾಡುತ್ತಿದ್ದ ಆರೋಪಿ ಬಂಧನ

ಪುತ್ತೂರು ಅಬಕಾರಿ ಪೊಲೀಸರ ಕಾರ್ಯಾಚರಣೆ : ಸವಣೂರಿನಲ್ಲಿ ಗೇರುಹಣ್ಣಿನ ಸಾರಾಯಿ ಮಾಡುತ್ತಿದ್ದ ಆರೋಪಿ ಬಂಧನ

- Advertisement -
- Advertisement -

ಪುತ್ತೂರು: ಸವಣೂರು ಗ್ರಾಮದ ಪುಣ್ಚಪ್ಪಾಡಿಯಲ್ಲಿ ಬೆಳ್ಳಂಬೆಳಗೆ ಕಾರ್ಯಾಚರಣೆ ನಡೆಸಿದ ಅಬಕಾರಿ ಪೊಲೀಸರು 900 ಲೀಟರ್ ಗೇರು ಹಣ್ಣಿನ ಹುಳಿ ರಸ ಮತ್ತು 1 ಲೀಟರ್ ಗೇರು ಹಣ್ಣಿನ ಕಳ್ಳಭಟ್ಟಿಯನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.ಸವಣೂರು ಗ್ರಾಮದ ಪುಣ್ಚಪ್ಪಾಡಿ ನಿವಾಸಿ ಧರ್ಮಪ್ರಕಾಶ್ ರೈ ಬಂಧಿತ ಆರೋಪಿ.


ಆರೋಪಿ ಧರ್ಮಪ್ರಕಾಶ್ ಅವರು ಪುಣ್ಚಪ್ಪಾಡಿ ಮನೆಗೆ ಇಳಿಸಿದ ಶೆಡ್ ನಲ್ಲಿ ಕಳ್ಳಭಟ್ಟಿ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Latest News

error: Content is protected !!