- Advertisement -
- Advertisement -
ಉಡುಪಿ: ಸಂತೆಕಟ್ಟೆಯ ಬಳಿ ಚಾಲಕನ ನಿಯಂತ್ರಣ ತಪ್ಪಿ ಉಡುಪಿಯಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಲಾರಿ ಯೊಂದು ಮಗುಚಿಬಿದ್ದ ಪರಿಣಾಮ ಸುಮಾರು 1 ಗಂಟೆಗೂ ಅಧಿಕ ಕಾಲ ಸಂಚಾರ ದಟ್ಟಣೆ ಉಂಟಾಯಿತು.
ಕ್ರಿಸ್ಮಸ್ ಪ್ರಯುಕ್ತ ರಜೆ ಇದ್ದ ಕಾರಣ ವಾಹನಗಳ ದಟ್ಟಣೆ ಅಧಿಕವಾಗಿದ್ದು, ಸಂತೆಕಟ್ಟೆಯಿಂದ ರೋಬೋ ಸಾಫ್ಟ್ ವರೆಗೆ, ಅತ್ತ ಸೇತುವೆಯ ವರೆಗೆ ಹಾಗೂ ನೇಜಾರು, ಸಂತೆ ನಡೆಯುವ ಸ್ಥಳದವರೆಗೂ ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದವು. ಈ ನಡುವೆ ಘನ ವಾಹನ ಬಿದ್ದ ಪರಿಣಾಮ ಸಂಚಾರಕ್ಕೆ ಮತ್ತಷ್ಟು ಅಡಚಣೆ ಉಂಟಾಯಿತು.
- Advertisement -