- Advertisement -
- Advertisement -
ಚಿಕ್ಕಮಗಳೂರು: ಇಲ್ಲಿನ ಅಜ್ಜಂಪುರ ತಾಲೂಕಿನ ಬಗ್ಗವಳ್ಳಿ ಗ್ರಾಮದಲ್ಲಿ ಜಂಗಲ್ ಕಟ್ ಮಾಡಲು ತೆರಳಿದ್ದ ಸಂದರ್ಭದಲ್ಲಿ ಲೈನ್ ಮ್ಯಾನ್ ಗೆ ವಿದ್ಯುತ್ ತಗುಲಿದ ಪರಿಣಾಮ ಲೈನ್ ಮ್ಯಾನ್ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ದೇವರಾಜು(33) ಎಂದು ಗುರುತಿಸಲಾಗಿದೆ. ಬೀರೂರಿನ ಹಿರಿಯಂಗಳ ಗ್ರಾಮದಲ್ಲಿ ಜಂಗಲ್ ಕಟ್ ಮಾಡಲು ತೆರಳಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಜಂಗಲ್ ಕಟ್ಟಿಂಗ್ ವೇಳೆಯಲ್ಲಿ ಸ್ಪರ್ಶಿಸಿದ ವಿದ್ಯುತ್ ನಿಂದಾಗಿ ಸ್ಥಳದಲ್ಲೇ ದೇವರಾಜು ಮೃತಪಟ್ಟಿದ್ದಾರೆ.
ಈ ಘಟನಾ ಸಂಬಂಧ ಬೀರೂರಿನ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- Advertisement -