- Advertisement -
- Advertisement -
ಮಡಿಕೇರಿ: ಮಾಣಿ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಮದೆನಾಡು ಬಳಿ ದಿಣ್ಣೆ ಕುಸಿತವಾಗಿದೆ. ಎರಡು ದಿನಗಳಿಂದ ಬಿರುಕು ಬಿಟ್ಟಿದ್ದ ಗುಡ್ಡದ ಕೆಳಭಾಗದ ಮಣ್ಣು ಕುಸಿತವಾಗಿದೆ.
ಹಿಟಾಚಿ ಯಂತ್ರಗಳ ಮೂಲಕ ಕುಸಿದ ಮಣ್ಣು ತೆರವು ಕಾರ್ಯ ನಡೆಸಲಾಗಿದೆ. ಗುಡ್ಡ ಬಿರುಕು ಬಿಟ್ಟಿದ್ದ ಹಿನ್ನೆಲೆಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸಲಾಗಿತ್ತು.
ಇದರಿಂದಾಗಿ ರಾತ್ರಿ ವೇಳೆ ಸಂಪಾಜೆ ಚೆಕ್ ಪೋಸ್ಟ್ ಬಳಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿತ್ತಲ್ಲದೇ, ಹಗಲು ವೇಳೆ ಆತಂಕದಿಂದಲೇ ವಾಹನ ಸಂಚಾರರು ಸಂಚರಿಸುವಂತಾಗಿದೆ.
- Advertisement -