Tuesday, May 14, 2024
Homeತಾಜಾ ಸುದ್ದಿಐತಿಹಾಸಿಕ ಕುಂಬಳೆ ಬೆಡಿ ಮಹೋತ್ಸವಕ್ಕೆ ತಯಾರಿಸಿದ್ದ ಲಕ್ಷಾಂತರ ಸಿಡಿಮದ್ದು ಪೊಲೀಸ್ ವಶಕ್ಕೆ

ಐತಿಹಾಸಿಕ ಕುಂಬಳೆ ಬೆಡಿ ಮಹೋತ್ಸವಕ್ಕೆ ತಯಾರಿಸಿದ್ದ ಲಕ್ಷಾಂತರ ಸಿಡಿಮದ್ದು ಪೊಲೀಸ್ ವಶಕ್ಕೆ

spot_img
- Advertisement -
- Advertisement -

ಮಂಜೇಶ್ವರ: ಕುಂಬಳೆಯ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ವರ್ಷಪ್ರತಿ “ಐತಿಹಾಸಿಕ ಕುಂಬಳೆ ಬೆಡಿ ಮಹೋತ್ಸವ”ವು ಹಮ್ಮಿಕೊಳ್ಳಲಾಗುತ್ತಿದ್ದು, ಈ ಬಾರಿಯು ಬೆಡಿ ಮಹೋತ್ಸವಕ್ಕೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ವಡಕ್ಕಂಚೆರಿ ಅಲತೊಡ್ ನಿಂದ ಸಿಡಿಮದ್ದು ತರಿಸಲು ನಿರ್ಧರಿಸಲಾಗಿತ್ತು.

ಆದರೆ ಲಕ್ಷಾಂತರ ರೂಪಾಯಿ ಮೊತ್ತದ ಸಿಡಿಮದ್ದು ಉತ್ಪನ್ನಗಳನ್ನು ಪಾಲಕ್ಕಾಡ್ ಪೊಲೀಸರು ಪತ್ತೆ ಹಚ್ಚಿ ತಮ್ಮ ವಶಕ್ಕೆ ಪಡಕೊಂಡ ಘಟನೆ ನಡೆದಿದೆ. ಕಳೆದ ಬಾರಿ ಪುತ್ತೂರಿನಿಂದ ಬೆಡಿ ತಂದಿದ್ದು ಈ ಬಾರಿ ಪಾಲಕ್ಕಾಡ್ ನಿಂದ ಬೆಡಿ ತರಿಸಲು ಬೇಡಿ ಉತ್ಸವ ಸಮಿತಿ ನಿರ್ಧರಿಸಿತ್ತು. ಈ ಬಗ್ಗೆ ಅಲ್ಲಿನ ಬೆಡಿ ಗುತ್ತಿಗೆದಾರರಾರಿಗೆ ಸಮಿತಿಯು ನಿನ್ನೆ ತಲುಪಿಸಬೇಕೆಂದು ಮುಂಚಿತವಾಗಿ ಮಾಹಿತಿಯನ್ನು ಕೂಡಾ ನೀಡಿದ್ದರು.

ಆದರೆ ನಿನ್ನೆ ಬೆಡಿ ತರಲು ಕುಂಬಳೆಗೆ ತಲುಪುವ ಮುನ್ನವೇ ತಯಾರಿಸಿ ಮಾಡಿಟ್ಟಿದ್ದ ಸಿಡಿಮದ್ದು ಉತ್ಪನ್ನ ಮತ್ತು ಪಟಾಕಿಗಳು ಇತರ ಉತ್ಪನ್ನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಗುತ್ತಿಗೆದಾರರು ಉತ್ಸವ ಕಮಿಟಿ ಪದಾಧಿಕಾರಿಗಳಿಗೆ ತಿಳಿಸಿದ್ದಾರೆ.

ಜಾತ್ರಾ ಮಹೋತ್ಸವಕ್ಕೆ ಬೇಕಾದ ಬೆಡಿಯನ್ನು ಪಾಲಕ್ಕಾಡ್ ಜಿಲ್ಲೆಯ ವಡಕ್ಕಂಚೆರಿ ಅಲತೊಡ್ ಎಂಬಲ್ಲಿ ಗದ್ದೆಯ ಹೊಳೆ ಬದಿಗೆ ಸೇರಿದ ರಬ್ಬರ್ ತೋಟದ ಶೆಡ್ ನಲ್ಲಿ ಸಂಗ್ರಹಿಸಿಡಲಾಗಿತ್ತು. ಪೊಲೀಸರನ್ನು ಕಂಡು ಕಾರ್ಮಿಕರು ಓಡಿ ಪರಾರಿಯಾಗಿದ್ದಾರೆ. ವರ್ಗೀಸ್ ಅವರ ಹೆಸರಲ್ಲಿ ಐದು ಕಿ.ಗ್ರಾಂ ಬೆಡಿ ಮದ್ದು ಕೈ ವಶ ಇಡುವ ಲೈಸನ್ಸ್ ಮಾತ್ರ ಇರುವುದೆಂದು ಆಳತೂರ್ ಡಿ.ವೈ.ಎಸ್.ಪಿ ಆರ್ ಸಂತೋಷ್ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಇದೀಗ ಸಿಡಿಮದ್ದು ಸಂಗ್ರಹಿಸಿಟ್ಟ ಸ್ಥಳದಲ್ಲಿ ಪೊಲೀಸ್‌ ಕಾವಲು ಏರ್ಪಡಿಸಲಾಗಿದ್ದು, ಬೆಡಿ ಮತ್ತು ಇತರ ಸ್ಪೋಟಕ ವಸ್ತುಗಳನ್ನು ಇನ್ನು ನಾಶಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಪಾರಂಪರಿಕವಾಗಿ ನಡೆಯುವ ಕುಂಬಳೆ ಬೆಡಿ ಇಡೀ ದೇಶ ವಿದೇಶದಲ್ಲಿ ಕೂಡಾ ಖ್ಯಾತಿಯನ್ನು ಪಡೆದಿದ್ದು, ಈ ಬಾರಿ ಬ್ರಹ್ಮಕಲಶದ ಬಳಿಕ ಉತ್ಸವಕ್ಕೆ ಹೆಚ್ಚಿನ ಕಲೆ ಕಂಡು ಬಂದಿತ್ತು. ಇದೀಗ ಉತ್ಸವಕ್ಕೆ ದಿನಂಪ್ರತಿ ಸಾವಿರಾರು ಅಧಿಕ ಭಕ್ತರು ಆಗಮಿಸಿ ದೇವರ ದರ್ಶನಗೈದು, ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಂದು ನಡೆಯುವ ಬೆಡಿ ಮಹೋತ್ಸವ ವೀಕ್ಷಿಸಲು ಈಗಾಗಲೇ ಜಿಲ್ಲೆಯಲ್ಲದೇ ಹೊರ ರಾಜ್ಯದಿಂದಲೂ ಭಕ್ತರು ಆಗಮಿಸಲು ಉತ್ಸುಕರಾಗಿದ್ದರು. ಇದೀಗ ಬೆಡಿ ಮಹೋತ್ಸವ ಸಮಿತಿ ದೇವರ ಪಾರಂಪರಿಕ ಸೇವೆಗಾಗಿ ಸಾಂಕೇತಿಕವಾಗಿ ಬೆಡಿ ಸಿಡಿಸಲು ನಿರ್ಧರಿಸಿದ್ದಾರೆ.

- Advertisement -
spot_img

Latest News

error: Content is protected !!