- Advertisement -
- Advertisement -
ಉಡುಪಿ:ವಿವಾಹಿತ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಬ್ರಹ್ಮಾವರದ ಹೇರೂರು ಮೆಸ್ಕಾಂ ಕ್ವಾಟ್ರಸ್ ಸಮೀಪ ನಡೆದಿದೆ. ಉಷಾ(31) ಮೃತ ಮಹಿಳೆ.
ಚಂದ್ರ ಹಾಂಡ ಅವರೊಂದಿಗೆ ವಿವಾಹದ ಬಳಿಕ ಬೆಂಗಳೂರಿನಲ್ಲಿ ವಾಸವಿದ್ದ ಉಷಾ 8 ತಿಂಗಳಿನಿಂದ ಹೇರೂರಿನ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.
ಇಬ್ಬರೂ ಪೇತ್ರಿಯ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದರು.ದಂಪತಿಯ ನಡುವೆ ಜಗಳವಾಗಿದ್ದು, ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಪತಿಯೇ ಕಾರಣ ಎಂದು ಆರೋಪಿಸಿ ಉಷಾ ಅವರ ಸಹೋದರ ವಸಂತ ಕುಲಾಲ್ ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ
- Advertisement -